ಅಗಲಿದ ಕಾರ್ಮಿಕ ನಾಯಕ ಹರೀಶ್ ನಾಯ್ಕರಿಗೆ ನುಡಿ ನಮನ

ದಾಂಡೇಲಿ : ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಕಾರ್ಮಿಕ ನಾಯಕರು ಮತ್ತು ಲೇಖಕರು ಆಗಿದ್ದ ಅಗಲಿದ ದಿ. ಹರೀಶ್ ನಾಯಕರಿಗೆ ನಗರದ ಜೀವ ವಿಮಾ ನಿಗಮದ ಶಾಖಾ ಕಛೇರಿಯ ಹತ್ತಿರ ನುಡಿ ನಮನ ಸಲ್ಲಿಸುವ ಕಾರ್ಯಕ್ರಮವನ್ನು ಹರೀಶ್ ನಾಯ್ಕ ಅವರ ಗೆಳೆಯರು ಮತ್ತು ಅಭಿಮಾನಿ‌ ಬಳಗದಿಂದ ಇಂದು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಹರೀಶ್ ನಾಯ್ಕರ ಭಾವಚಿತ್ರಕ್ಕೆ ಪುಷ್ಪ ಗೌರವವನ್ನು ಸಲ್ಲಿಸಲಾಯಿತು. ನಂತರ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂ ಖಾನ್, ನಗರಸಭೆಯ ಮಾಜಿ ಅಧ್ಯಕ್ಷರಾದ ತಸ್ವರ್ ಸೌದಾಗರ, ಕಾರ್ಮಿಕ ಮುಖಂಡರಾದ ಎಸ್.ವಿ. ಸಾವಂತ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಪೂಜಾರ, ಸಿಐಟಿಯು ಮುಖಂಡ ಸಲೀಂ ಸೈಯದ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಕಾರ್ಯದರ್ಶಿ ದಾದಾಪೀರ್ ನದಿಮುಲ್ಲಾ, ಡಿ ವೈ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಸ್ಯಾಮಸನ್, ಮಾಜಿ ನಗರಸಭೆಯ ಸದಸ್ಯರಾದ ರಾಮಲಿಂಗ ಜಾದವ್, ಮುಖಂಡರುಗಳಾದ ಜಾಫರ್ ಮಾಸನಕಟ್ಟಿ, ಪ್ರಭುದಾಸ್ ಎನಿಬೆರ, ಫಿರೋಜ್ ಪಿರ್ಜಾದೆ, ರಾಹುಲ ಬಾವಾಜಿ ಮೊದಲಾದವರು ಮಾತನಾಡಿ ಹರೀಶ್ ನಾಯ್ಕ ಅವರ ಹೋರಾಟದ ಬದುಕನ್ನು ಸ್ಮರಿಸಿಕೊಂಡರು.

ಕಾರ್ಯಕ್ರಮದಲ್ಲಿ ಹರೀಶ್ ನಾಯಕರ ಅಭಿಮಾನಿಗಳು ಹಾಗೂ ಗೆಳೆಯರು ಭಾಗವಹಿಸಿದ್ದರು.