ಗೃಹಲಕ್ಸ್ಮಿ ಯೋಜನೆಯ ಅರ್ಜಿ ಸಲ್ಲಿಸಲು ಹಣ ಪಡೆಯುವವರ ಮೇಲೆ ಕ್ರಮ ಕೈಗೊಳ್ಳಿ : ಅನಿಲ್ ಕೊಠಾರಿ.

ಸಿದ್ದಾಪುರ : ಗೃಹಲಕ್ಸ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಕೆಲವೊಂದು ಕೇಂದ್ರಗಳಲ್ಲಿ ಮಹಿಳೆಯರಿಂದ ಹಣ ಪಡೆಯುತ್ತಿರುವ ಬಗ್ಗೆ ಕೇಳಿ ಬಂದಿದೆ ಇಂತಹ ಕೇಂದ್ರಗಳ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದು ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆಯ ಕಾರ್ಯಕರ್ತ ಅನಿಲ್ ಕೊಠಾರಿ ಆಗ್ರಹ ಮಾಡಿದ್ದಾರೆ
ಈ ಯೋಜನೆಯ ಫಲಾನುಭವಿಗಳು ಅರ್ಜಿ ಸಲ್ಲಿಕೆ ಮಾಡಲು ಬಂದಾಗ ಅರ್ಜಿ ಸಲ್ಲಿಕೆ ಆದ ನಂತರ ಬೇರೆ ಬೇರೆ ಕಾರಣ ಹೇಳಿ ಅರ್ಜಿ ಸಲ್ಲಿಕೆಯ ಕೇಂದ್ರದವರು 50,100 ಹೀಗೆ ಮನಬಂದಂತೆ ಹಣವನ್ನ ವಸೂಲಿ ಮಾಡುತ್ತಿದ್ದಾರೆ ಇಂತಹ ಕೇಂದ್ರಗಳ ಮೇಲೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕು
ಒಂದು ವೇಳೆ ಇದೇ ಪ್ರಕ್ರಿಯೆ ಮುಂದುವರೆದರೆ ನಾವು ಪ್ರತಿಭಟನೆಯನ್ನ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ