ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ವಿಲೀನವಾಗಿದೆ-ಸ್ಪೀಕರ್ ಕಾಗೇರಿ.

ಸಿದ್ದಾಪುರ : ಬಿಜೆಪಿಯೊಂದಿಗೆ ಜೆಡಿಎಸ್ ಕ್ಷೇತ್ರದಲ್ಲಿ ವಿಲೀನಗೊಂಡಿರುವುದು ಹಾಗೂ ವಾತಾವರಣ ಎಲ್ಲೆಡೆ ಉತ್ತಮವಾಗಿ ಇರುವುದು ನಮ್ಮ ದಾಖಲೆ ಮತದ ಗೆಲುವಿಗೆ ಕಾರಣವಾಗಿದೆ ಎಂದು ಸಿರ್ಸಿ ಸಿದ್ದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರು.
ಅವರು ಪಟ್ಟಣದ ಪಕ್ಷದ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ನಾನು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಇರುವುದರಿಂದ ದಾಖಲೆ ಗೆಲುವಿನ ಸಾಧಿಸುತ್ತೇವೆ ಎಂದರು.ಇನ್ನೋರ್ವ ಮುಖಂಡ ಶಶಿಭೂಷಣ್ ಹೆಗಡೆ ಮಾತನಾಡಿ ನಮ್ಮ ಜಿಲ್ಲೆಗೆ ಪ್ರಧಾನ ಮಂತ್ರಿಗಳು ಭೇಟಿ ನೀಡುತ್ತಿರುವುದು ನಮ್ಮ ಸುದೈವ, ಎಲ್ಲಾ ಅಭ್ಯರ್ಥಿಗಳು ಜಯಗಳಿಸುತ್ತಾರೆ ಎಂದರು. ಹಲವು ನಾಯಕರು ಬಿಜೆಪಿ ಸೇರ್ಪಡೆಗೊಂಡರು ಈ ವೇಳೆಯಲ್ಲಿ ಮಂಡಲ ಅಧ್ಯಕ್ಷ ಮಾರುತಿ ನಾಯ್ಕ್ ಪ್ರಮುಖರಾದ ತಿಮ್ಮಪ್ಪ ಮಡಿವಾಳ್ ಗುರುರಾಜ್ ಶಾನ್ ಭಾಗ್, ನಂದನ್ ಬೋರ್ಕರ್ ಮುಂತಾದವರು ಉಪಸ್ಥಿತರಿದ್ದರು
ಇದೇ ವೇಳೆ ಜೆಡಿಎಸ್ ತೊರೆದು ಹಲವರು ಬಿಜೆಪಿ ಸೇರ್ಪಡೆ ಗೊಂಡರು ನೂತನ ವಾಗಿ ಸೇರ್ಪಡೆಗೊಂಡವರನ್ನು ಕಾಗೇರಿ ಅವರು ಶಾಲು ಹಾಕಿ ಧ್ವಜ ನೀಡಿ ಬರಮಾಡಿಕೊಂಡರು.