ಸಿದ್ದಾಪುರ : ಕಾಲೇಜಿನ ಪ್ರಿನ್ಸಿಪಾಲರ ನಡುವಳಿಕೆ ಖಂಡನೆ , ಪ್ರತಿಭಟನೆಯ ಎಚ್ಚರಿಕೆ.

ಸಿದ್ದಾಪುರ : ಶಿರಸಿ ತಾಲೂಕಿನ ಕಲ್ಲಿಯ ಮುರಾರ್ಜಿ ದೇಸಾಯಿ ಕಾಲೇಜಿನ ಪ್ರಿನ್ಸಿಪಾಲರ ನಡುವಳಿಕೆಯನ್ನು ಖಂಡಿಸಿ ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ನವರು ಪ್ರಿನ್ಸಿಪಾಲರನ್ನು ವರ್ಗಾವಣೆ ಮಾಡುವಂತೆ ಆಗ್ರಹವನ್ನು ಮಾಡಿದ್ದಾರೆ.
ಪಟ್ಟಣದಲ್ಲಿ ಬ್ಲಾಕ್ ಅಧ್ಯಕ್ಷ ವಸಂತ ನಾಯ್ಕ ಮಾತನಾಡಿ ಪಾಲಕರು ಪೋಷಕರು ಕಾಲೇಜಿಗೆ ಪ್ರವೇಶ ಪಡೆಯಲು ಬಂದಾಗ ಅವರಿಗೆ ಅವಾಚ್ಯ ಶಬ್ದದಿಂದ ಬೈದು ಸರಿಯಾದಂತಹ ಮಾಹಿತಿಯನ್ನು ನೀಡದೆ ಹಾರಿಕೆ ಉತ್ತರವನ್ನು ನೀಡಿ ಅವರಿಗೆ ಆವೇಶದಿಂದ ಬೈಯ್ದು ನಿಂದಿಸುತ್ತಾರೆ. ಜೊತೆಯಲ್ಲಿ ಈ ಹಿಂದೆ ಅಲ್ಲಿ ಕೆಲಸವನ್ನು ಮಾಡುತ್ತಿರುವ ಅತಿಥಿ ಶಿಕ್ಷಕರ ಮೇಲೆ ಹಲ್ಲೆಯನ್ನು ಮಾಡಿರುತ್ತಾರೆ ದೈಹಿಕ ಹಲ್ಲೆಯನ್ನು ಕೂಡ ನಡೆಸಿರುತ್ತಾರೆ.
ಇದಕ್ಕೆ ಸಂಬಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಇದನ್ನು ಗಂಭೀರವಾಗಿ ಪರಿಗಣಿಸಿ
ಸಂಬಂಧಿಸಿದ ಡಿಡಿಪಿಐ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು, ತಕ್ಷಣ ಅವರ ವಿರುದ್ಧ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕು
ಯಾರಾದರೂ ಈ ಬಗ್ಗೆ ಕೇಳಿದರೆ ನೀವ್ಯಾರು ಕೇಳಲು ಎಂದು ಪ್ರಶ್ನಿಸುತ್ತಾರೆ ಕೂಡಲೇ ಅವರ ಮೇಲೆ ಪ್ರಕರಣವನ್ನು ದಾಖಲಿಸಿ ನ್ಯಾಯ ಒದಗಿಸಿ ಕೊಡಬೇಕು ಎಂದು ವಿನಂತಿಸಿದ್ದಾರೆ.
ಯಾವುದೇ ಕ್ರಮವಾಗದಿದ್ದರೆ ನಾವು ಕಲ್ಲಿಯ ಮುರಾರ್ಜಿ ದೇಸಾಯಿ ಕಾಲೇಜಿನ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗಾಂಧೀಜಿ ನಾಯ್ಕ್ ಚಂದ್ರು ಕಾನಡೆ, ಮಾರುತಿ ಕಿಂದ್ರಿ ಪ್ರಶಾಂತ್ ನಾಯ್ಕ್ ಉಪಸ್ಥಿತರಿದ್ದರು.