ಬಿಜೆಪಿ ಸೇರಿದ ದಾಂಡೇಲಿಯ ಕಾರ್ಮಿಕ ಮುಖಂಡ ಶಿವಾನಂದ ಗಗ್ಗರಿ

ದಾಂಡೇಲಿ : ನಗರದ ಕಾರ್ಮಿಕ ಮುಖಂಡರು ಹಾಗೂ ಇತ್ತೀಚಿನ ಕೆಲ ವರ್ಷಗಳಿಂದ ಬಿಜೆಪಿಯಿಂದ ಬಹುದೂರ ಉಳಿದಿದ್ದ ಶಿವಾನಂದ ಗಗ್ಗರಿಯವರು ಮಾಜಿ ಶಾಸಕರಾದ ಸುನೀಲ ಹೆಗಡೆಯವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುವುದರ ಮೂಲಕ ಮಾತೃ ಪಕ್ಷಕ್ಕೆ ಮರಳಿದ್ದಾರೆ.

ಬಿಜೆಪಿ ಪಕ್ಷವನ್ನು ನಗರದಲ್ಲಿ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವಾನಂದ ಗಗ್ಗರಿಯವರಿಗೆ ಬಿಜೆಪಿ ಸರಕಾರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹುದ್ದೆಯನ್ನು ಕರುಣಿಸಿತ್ತು. ಆನಂತರ ರಾಜಕೀಯ ವಿದ್ಯಮಾನದಲ್ಲಿ ಬಿಜೆಪಿಯಿಂದ ದೂರ ಉಳಿದಿದ್ದ ಶಿವಾನಂದ ಗಗ್ಗರಿಯವರು ಕಾರ್ಮಿಕ ಸಂಘಟನೆಯ ಮೂಲಕ ಕಾರ್ಮಿಕ ಮುಖಂಡರಾಗಿ ರೂಪುಗೊಂಡಿದ್ದರು. ಇದೀಗ ಮತ್ತೇ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇವರ ಜೊತೆ ನಗರದ ಯುವ ಮುಖಂಡರಾದ ಭೀಮುಶಿ ಬಾದುಲಿಯವರು ಸಹ ಬಿಜೆಪಿ ಸೇರ್ಪಡೆಯಾಗಿದ್ದಾರೆ.