ಪ್ರಧಾನಿ ನರೇಂದ್ರ ಮೋದಿ ಅವರು ಕ್ಷೇತ್ರಕ್ಕೆ ಆಗಮಿಸುತ್ತಿರುವುದು ಅತ್ಯಂತ ಸಂತಸ ಉಂಟುಮಾಡಿದೆ :ರೂಪಾಲಿ ಎಸ್.ನಾಯ್ಕ


ಕಾರವಾರ: ಪ್ರಧಾನಿ ನರೇಂದ್ರ ಮೋದಿ ಅವರು ಕ್ಷೇತ್ರಕ್ಕೆ ಆಗಮಿಸುತ್ತಿರುವುದು ಅತ್ಯಂತ ಸಂತಸ ಉಂಟುಮಾಡಿದೆ. ಕಾರವಾರ-ಅಂಕೋಲಾ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.
ಕಾರವಾರ ನಗರದ ವಾರ್ಡ್‌ ನಂ 18ರ ಶಿವನಾಥ ದೇವಸ್ಥಾನದ ಹತ್ತಿರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಇಡೀ ವಿಶ್ವವೇ ಮೆಚ್ಚಿರುವ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಅದರಲ್ಲೂ ನನ್ನ ಕ್ಷೇತ್ರಕ್ಕೆ ಆಗಮಿಸುತ್ತಿರುವುದು ಎಲ್ಲೆಡೆ ಸಂಭ್ರಮಕ್ಕೆ ಕಾರಣವಾಗಿದ್ದರೂ ಕೆಲವರ ನಿದ್ದೆಗೆಡಿಸಿದೆ. ಕಾರ್ಯಕ್ರಮ ನಡೆಸದಿರುವಂತೆ ಮಾಡಲು ಕೋರ್ಟ್ ನ ಮೊರೆ ಹೋಗುತ್ತಿದ್ದಾರೆ. ಜಿಲ್ಲೆಗೆ ಮೋದಿ ಅವರು ಆಗಮಿಸಲು ಪ್ರತಿಯೊಬ್ಬರೂ ಕಾತರದಿಂದ ಕಾಯುತ್ತಿದ್ದರು. ಆ ಸುಸಂದರ್ಭ ಬಂದಿದೆ. ನರೇಂದ್ರ ಮೋದಿ ಕ್ಷೇತ್ರದ ಜಿಲ್ಲೆಯ ಜನರ ಕಷ್ಟಗಳಿಗೆ ಸ್ಪಂದಿಸಲಿದ್ದಾರೆ ಎಂದರು.
ಭಾರತೀಯ ಜನತಾ ಪಕ್ಷ ಹಾಗೂ ಕ್ಷೇತ್ರದ ಜನತೆ ನೀಡಿದ ಜವಾಬ್ದಾರಿಯನ್ನು ಶಿರಸಾ ಪಾಲಿಸಿದ್ದೇನೆ. ನುಡಿದಂತೆ ನಡೆದು ಕೊಂಡಿದ್ದೇನೆ. ಜನರಿಗೆ ನೀಡಿದ ಆಶ್ವಾಸನೆಯನ್ನು ಬಹುತೇಕ ಈಡೇರಿಸಿದ್ದೇನೆ. ನಿಮ್ಮೆಲ್ಲರ ಹಾರೈಕೆ ಆಶೀರ್ವಾದದಿಂದ ಭಾರತೀಯ ಜನತಾ ಪಾರ್ಟಿ ಮತ್ತೊಂದು ಅವಕಾಶವನ್ನು ನೀಡಿದೆ. ನಿಮ್ಮ ಮತವನ್ನು ಕಮಲದ ಗುರುತಿಗೆ ನೀಡಿ ಮತ್ತೊಮ್ಮೆ ಆಯ್ಕೆ ಮಾಡುವಂತೆ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ವಾರ್ಡ್‌ನ ಮಹಿಳೆಯರೆಲ್ಲರೂ ಬಿಜೆಪಿಗೆ ಬೆಂಬಲಿಸುವುದಾಗಿ ಭರವಸೆ ನೀಡಿ. ರೂಪಾಲಿ ನಾಯ್ಕ ಅವರಿಗೆ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ, ನಗರಸಭೆ ಅಧ್ಯಕ್ಷರಾದ ಡಾ. ನಿತಿನ ಪಿಕಳೆ, ಉಪಾಧ್ಯಕ್ಷರಾದ ಪಿ.ಪಿ. ನಾಯ್ಕ, ಬಿಜೆಪಿ ಕಾರವಾರ ನಗರಾಧ್ಯಕ್ಷರಾದ ನಾಗೇಶ ಕುರಡೇಕರ, ಬಿಜೆಪಿ‌ ಜಿಲ್ಲಾ ಆಹ್ವಾನಿತರಾದ ಮನೋಜ ಭಟ್, ನಗರಸಭಾ ಸದಸ್ಯರು, ಶರಾಪ್ ಅಸೋಸಿಯೇಷನ್ ಅಧ್ಯಕ್ಷರಾದ ಅಶೋಕ ಕುಡ್ತರಕರ, ದೈವಜ್ಞ ಸಮಾಜ ಕಾರ್ಯದರ್ಶಿ ಶ್ರೀಕಾಂತ ವೆರ್ಣೇಕರ, ಉಲ್ಲಾಸ ರೇವಣಕರ, ರಾಮದಾಸ ಅಣ್ವೇಕರ, ಗುರು ಅಣ್ವೇಕರ, ಚಂದ್ರಹಾಸ ಕುಡ್ತಲಕರ, ದೈವಜ್ಞ‌ಸಮಾಜದ ಮುಖಂಡರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು