ಆರು ಸಾಧಕರಿಗೆ ವಾಲ್ಮೀಕಿ ಪ್ರಶಸ್ತಿ.! ಸಿಎಂ ಬೊಮ್ಮಾಯಿಯಿಂದ ಪ್ರಶಸ್ತಿ ಪ್ರದಾನ

ಬೆಂಗಳೂರು: ರಾಜ್ಯ ಸರ್ಕಾರ 2022 ನೇ ಸಾಲಿನ ವಾಲ್ಮೀಕಿ ಪ್ರಶಸ್ತಿಯನ್ನು ಪ್ರಕಟ ಮಾಡಿದೆ. ಇಂದು ಬೆಂಗಳೂರಿನಲ್ಲಿ ಆರು ಸಾಧಕರಿಗೆ ವಾಲ್ಮೀಕಿ ಪ್ರಶಸ್ತಿ ನೀಡಲಾಗುವುದು.

ಬೆಂಗಳೂರಿನ ಎಲ್. ಮುನಿಸ್ವಾಮಿ, ಬಳ್ಳಾರಿಯ ಉಷಾರಾಣಿ, ಚಿಕ್ಕಬಳ್ಳಾಪುರ ಜಿಲ್ಲೆಯ ಎನ್. ನಾಗಪ್ಪ, ವಿಜಯನಗರ ಜಿಲ್ಲೆಯ ಪದ್ಮಾ, ಬೆಳಗಾವಿ ಜಿಲ್ಲೆಯ ನಾಗಪ್ಪಹೆಚ್. ಕೋಣಿ, ಮೈಸೂರು ಜಿಲ್ಲೆಯ ಹೆಚ್.ಎಸ್. ಸುಭಾಷ್ ಅವರಿಗೆ ವಾಲ್ಮೀಕಿ ಪ್ರಶಸ್ತಿ ನೀಡಲಾಗುವುದು. ಇಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.