ಹಿಂದೂ ಸಂಘಟನೆಗಳಿಂದ ‘ಸಾವರ್ಕರ್ ಗಣೇಶೋತ್ಸವ’

ಬೆಂಗಳೂರು: ಹಿಂದೂ ಸಂಘಟನೆಗಳು ಬೆಂಗಳೂರಿನ ವಿವಿಧ ಕಡೆಗಳಲ್ಲಿ ಸಾವರ್ಕರ್ ಗಣೇಶೋತ್ಸವ ಆಚರಿಸಿದ್ದಾರೆ. ನಾಗರಭಾವಿಯ ಮಲ್ಲತ್ತಹಳ್ಳಿಯಲ್ಲಿ ಗಣೇಶನ ಪೆಂಡಾಲ್ ನಲ್ಲಿ ಸಾವರ್ಕರ್, ಬಾಲ ಗಂಗಾಧರ ತಿಲಕರ ಪೋಟೋ ಇಟ್ಟು ಪೂಜೆ ನೆರವೇರಿಸಿದರು. ಶ್ರೀರಾಮ ಸೇನೆ ನಗರಾಧ್ಯಕ್ಷ ಚಂದ್ರಶೇಖರ್ ಕೋಟೆ ನೇತೃತ್ವದಲ್ಲಿ ಸಂಭ್ರಮದ ಗಣೇಶೋತ್ಸವ ನಡೆಯುತ್ತಿದೆ.

ಪೆಂಡಾಲ್ ಅಕ್ಕ ಪಕ್ಕ ಮನೆ ಗೋಡೆಗಳಿಗೂ ಸಾವರ್ಕರ್, ತಿಲಕರ ಪೋಟೋ ಹಾಕಿರುವ ಹಿಂದೂ ಕಾರ್ಯಕರ್ತರು ಹಬ್ಬವನ್ನು ಆಚರಿಸಿದ್ದಾರೆ. ಅಲ್ಲದೇ ಸಾವರ್ಕರ್ ಜೀವನ ಚರಿತ್ರೆಯ ಪುಸ್ತಕಗಳನ್ನ ಕೂಡಾ ಹಂಚುತ್ತಿದ್ದಾರೆ. ಸಾವರ್ಕರ್ ಗೆ ಜೈಕಾರ ಹಾಕಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.