ತೆಂಗಿನಕಾಯಿ ತೆಗೆಯುತ್ತಿರೋ ವೇಳೆ ಮರದಿಂದ ಬಿದ್ದು ವ್ಯಕ್ತಿ ಸಾವು.!

ಭಟ್ಕಳ: ತೆಂಗಿನ ಮರ ಏರಿ ಕಾಯಿ ತೆಗೆಯುವ ವೇಳೆ ಮರದ ಅರ್ಧ ಭಾಗ ತುಂಡಾಗಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಸೋಡಿಗದ್ದೆ ಸಮೀಪ ನಡೆದಿದೆ

ಶಂಕರ ಮಂಜು ಮೊಗೇರ ಮೃತ ದುರ್ದೈವಿ. ಈತ  ತೆಂಗಿನ ಮರ ಏರಿ ಕಾಯಿ ತೆಗೆಯುತ್ತಿರುವಾಗ ಆಕಸ್ಮಿಕವಾಗಿ ತೆಂಗಿನ ಮರದ ಅರ್ಧ ಭಾಗ ತುಂಡಾಗಿ ಬಿದ್ದಿದೆ. ತುಂಡಾದ ಭಾಗದ ಸಮೇತ ನೆಲಕ್ಕೆ ಬಿದ್ದು ಶಂಕರ್ ಮೊಗೇರ್ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.