ಧಾರವಾಡ: ಕುಡಿದ ಮತ್ತಿನಲ್ಲಿ ತನ್ನ ಹೆಂಡತಿಯನ್ನೇ ಹತ್ಯೆಗೈದು ಎಸ್ಕೇಪ್ ಆಗಿದ್ದ ಕೊಲೆಗಡುಕ ಗಂಡನನ್ನು ಬೆಳಗಾವಿಯಲ್ಲಿ ಸೆರೆಹಿಡಿಯುವಲ್ಲಿ ಧಾರವಾಡ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಗದಿಗೆಪ್ಪ ಪಠಾತ್ ಹೆಂಡತಿಯನ್ನೇ ಕೊಲೆಗೈದ ಪಾಪಿ ಪತಿರಾಯ. ಹೊಲದಲ್ಲಿ ಮೂಲಂಗಿ ತೊಳೆಯುತ್ತ ಕುಳಿತಿದ್ದ ಮಂಜವ್ವಳನ್ನು, ಪತಿ ಗದಿಗೆಪ್ಪ ಕುಡಿದ ಮತ್ತಿನಲ್ಲಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ.
ಆರೋಪಿ ಪತ್ತೆಗಾಗಿ ಶಹರ ಠಾಣೆ ಪೊಲೀಸರು ಬಲೆ ಬೀಸಿದ್ದರು. ಇಂದು ಬೆಳಗಾವಿಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೇ ಗದಿಗೆಪ್ಪ ಹಿಂದೆ ಹೊಲದ ಜಗಳದ ವಿಚಾರವಾಗಿ ಕೊಲೆ ಮಾಡಿ 14 ವರ್ಷ ಜೈಲು ವಾಸ ಅನುಭವಿಸಿದ್ದ. ಕಳೆದ ನಾಲ್ಕು ವರ್ಷಗಳ ಹಿಂದೆ ಈತ ಜೈಲಿನಿಂದ ಹೊರ ಬಂದಿದ್ದ.