ಗಣೇಶ ವಿಸರ್ಜನೆ ನಿಮಿತ್ತ ಸೆ.10 ರಂದು ಮದ್ಯ ನಿಷೇಧಿಸಿ ಡಿಸಿ ಆದೇಶ

ಕಾರವಾರ: ಜಿಲ್ಲೆಯ ವಿವಿದ ತಾಲೂಕುಗಳ ವ್ಯಾಪ್ತಿಯಲ್ಲಿ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡುವ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿದ ಹಾಗೂ ಸಾರ್ವಜನಿಕ ಹಿತದೃಷ್ಟಯಿಂದ ಜಿಲ್ಲೆಯ ವಿವಿಧೆಡೆ ಮದ್ಯ ಮಾರಾಟ ಹಾಗೂ ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಹಳಿಯಾಳ, ದಾಂಡೇಲಿ, ಕಾರವಾರ ಶಹರ ಪೊಲೀಸ್ ಠಾಣೆ, ಮಲ್ಲಾಪುರ ಪೊಲೀಸ್ ಠಾಣೆ, ಅಂಕೋಲಾ ತಾಲೂಕುಗಳ ವ್ಯಾಪ್ತಿಯಲ್ಲಿ ಸೆ. 10 ರ ಬೆಳಿಗ್ಗೆ 6 ರಿಂದ ಸೆ. 11 ರ ಬೆಳಿಗ್ಗೆ 6 ರವರೆಗೆ ವೈನ್‌ಶಾಪ್ ಮತ್ತು ಬಾರ್ ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮತ್ತು ಸಾಗಾಟವನ್ನು ಬಂದ್ ಮಾಡಲು ಹಾಗೂ ಕಾರವಾರ ಅಬಕಾರಿ ಉಪ ಆಯುಕ್ತರು ಈ ಆದೇಶವನ್ನು ಸಂಬಂಧಿಸಿದವರಿಗೆ ಜಾರಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.