ಕಪಾಟಿನಲ್ಲಿಟ್ಟಿದ್ದ ನಗದು ಹಾಗೂ ಬಂಗಾರ ಕಳ್ಳತನ: ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಶಿರಸಿ: ಮನೆಯ ಬೀಗ ಒಡೆದು ಕಪಾಟಿನಲ್ಲಿದ್ದ 2.55 ಲಕ್ಷ ರೂ. ಹಾಗೂ ಬಂಗಾರದ ಆಭರಣಗಳನ್ನು ಕಳ್ಳರು ಕದ್ದ ಘಟನೆ ಬನವಾಸಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಇಲ್ಲಿಯ ಖಲೀಲ ಅಬ್ದುಲ್ ಶೇಖ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.

ಮಸೀದಿಯಲ್ಲಿ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಖಲೀಲ ಅವರು ಅಲ್ಲಿಗೆ ತೆರಳಿದ್ದರು. ಆದರೆ, ರಾತ್ರಿ ಅವರ ಮನೆಯೊಳಗೆ ಸಪ್ಪಳ ಆಗುತ್ತಿದ್ದುದನ್ನು ಕಂಡು ಪಕ್ಕದ ಮನೆ ವ್ಯಕ್ತಿ ಕರೆ ಮಾಡಿ ತಿಳಿಸಿದ್ದಾನೆ. ತಕ್ಷಣ ಖಲೀಲ ಮನೆಗೆ ವಾಪಸಾದರೂ, ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾನೆ. ಕಪಾಟಿನಲ್ಲಿ ಇಟ್ಟಿದ್ದ ಮಕ್ಕಳ ಬಂಗಾರದ ಉಂಗುರ ಸಹ ಕಳ್ಳನ ಪಾಲಾಗಿದೆ. ಈ ಕುರಿತಂತೆ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.