ಮಳೆಯ ಅಬ್ಬರ ಕಡಿಮೆಯಾದರೂ ನಿಲ್ಲದ ಸಮುದ್ರ ಕೊರೆತ.! ತೀರ ಪ್ರದೇಶದಲ್ಲಿ ಸಂಕಷ್ಟ.!

ಹೊನ್ನಾವರ: ಮಳೆಯ ಅಬ್ಬರ ಕಡಿಮೆಯಾದರೂ ಕರಾವಳಿ ಭಾಗದಲ್ಲಿ ಮಳೆಯಿಂದ ಸಮುದ್ರ ಕೊರೆತ ಹೆಚ್ಚಾಗಿದೆ. ತಾಲೂಕಿನ ಕರ್ಕಿ ಗ್ರಾ. ಪಂ ವ್ಯಾಪ್ತಿಯ ತಪ್ಪಲಕೇರಿ ತೀರ ಪ್ರದೇಶದಲ್ಲಿ ಕಡಲ ಕೊರೆತದಿಂದ ತಡೆಗೋಡೆಗಳು ಉರುಳಿ ಬಿದ್ದಿದ್ದು, ತೆಂಗಿನ ಮರಗಳು ನೆಲಕಚ್ಚಿವೆ.

ಅಬ್ಬರ ಅಲೆಗಳಿಂದ ದಡಕ್ಕೆ ಬಂದ ಮರಳಿನಿಂದ ಬಾವಿಯೊಂದು ಸಂಪೂರ್ಣ ಮುಚ್ಚಿಹೋಗಿದೆ. ಅಲ್ಲದೇ ದಡದಂಚಿನ ಅನೇಕ ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಈ ಕುರಿತು ಶೀಘ್ರ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.