ಕಾರವಾರದಲ್ಲಿ ಆ. 20 ವಿದ್ಯುತ್ ಅದಾಲತ್: ಸಮಸ್ಯೆಗಳಿದ್ದರೆ ಹೇಳಿಕೊಳ್ಳಿ ಎಂದ ಹೆಸ್ಕಾಂ

ಕಾರವಾರ: ಕಾರವಾರ ಉಪವಿಭಾಗ ವ್ಯಾಪ್ತಿಯ ಭೈರೆ, ಮಧ್ಯೆವಾಡ ಮತ್ತು ಕಡವಾಡ ಗ್ರಾಮಗಳಲ್ಲಿ ಆ. 20 ರಂದು ಬೆಳಿಗ್ಗೆ 11 ಗಂಟೆಗೆ ವಿದ್ಯುತ್ ಅದಾಲತ್‌ ಹಮ್ಮಿಕೊಳ್ಳಲಾಗಿದೆ. ಗ್ರಾಹಕರು ವಿದ್ಯುತ್ ಸಂಬಂಧಿತ ಸಮಸ್ಯೆಗಳಿದ್ದರೆ ಸಭೆಗೆ ಹಾಜರಾಗಿ ತಮ್ಮ ಕುಂದು ಕೊರತೆಗಳ ಬಗ್ಗೆ ಅಹವಾಲುಗಳನ್ನು ನೀಡಬೇಕು ಎಂದು ಹೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗ ಸಹಾಯಕ ಕಾರ್ಯ ನಿರ್ವಾಹಕ ಇಂಜಿನೀಯರ್ ತಿಳಿಸಿದ್ದಾರೆ.