ಪರೇಶ್ ಮೇಸ್ತಾ ಹತ್ಯೆಯ ಎ 1 ಆರೋಪಿಗೆ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ ಸ್ಥಾನ ನೀಡಿದ್ದ ಬಿಜೆಪಿ ಸರ್ಕಾರ: ಜನರ ವಿರೋಧಕ್ಕೆ ಆದೇಶ ಹಿಂಪಡೆದ ಸರ್ಕಾರ

ಕಾರವಾರ: ಜಿಲ್ಲೆಯ ವಕ್ಫ್ ಮಂಡಳಿ ಉಪಾಧ್ಯಕ್ಷ ಸ್ಥಾನವನ್ನು ಪರೇಶ್ ಮೇಸ್ತಾ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಆಜಾದ್ ಅಣ್ಣಿಗೇರಿಗೆ ನೀಡಿದ್ದು, ಹಿಂದೂಪರ ಸಂಘಟನೆ ಹಾಗೂ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಇದಲ್ಲದೆ ಕುದ್ದು ಕರಾವಳಿ ಭಾಗದ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಆಯ್ಕೆ ವಿರುದ್ಧ ತೀವ್ರ ಆಕ್ಷೇಪ ಬಂದ ಹಿನ್ನೆಲೆ ರಾಜ್ಯ ವಕ್ಫ್ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊದಲ ಆದೇಶ ತಡೆ ಹಿಡಿಯಲಾಗಿದೆ ಎಂದು ಇಂದು ಆದೇಶ ಹೊರಡಿಸಿದ್ದಾರೆ.