ಜೋಯಿಡಾ: ತಾಲೂಕಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರ ಎನ್.ಎಸ್.ಎಸ್ ಶಿಬಿರ ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ನಡೆಯಿತು.
ಪ್ರಾಚಾರ್ಯರಾದ ರವಿಕುಮಾರ ಹೀರೆಕೋಡಿ ಮಾತನಾಡಿ, ಈ ಸಂಸ್ಥೆಯಲ್ಲಿ ತಾಂತ್ರಿಕ ಶಿಕ್ಷಣ ಪಡೆದಿದ್ದೀರಿ. ವಿದ್ಯೆ ಗಳಿಸಿದರೂ ವಿನಯ, ನಡತೆ ಕೂಡಾ ಜೀವನದಲ್ಲಿ ಅತಿ ಮುಖ್ಯ. ಶಿಕ್ಷಣ ಪಡೆದ ನಂತರ ಮುಂದಿನ ಜೀವನ ಉತ್ತಮವಾಗಿಸಿಕೊಂಡು ಇನ್ನಷ್ಟು ಸಾಧನೆ ಮಾಡಿ. ಇದಕ್ಕೆ ನಮ್ಮ ಶಿಕ್ಷಕರ ಸಹಾಯ ಸಹಕಾರ ಯಾವಗಲೂ ಇರುತ್ತದೆ. ಗಳಿಸಿಕೊಂಡ ಜ್ಞಾನ ಮುಂದಿನ ನಿಮ್ಮ ಜೀವನದ ದಾರಿದೀಪವಾಗಲಿ ಎಂದು ಹೇಳಿದರು.
ನಂತರ ಕಾರ್ಯಕ್ರಮದಲ್ಲಿ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ಉಪನ್ಯಾಸಕರಾದ ಬಂತೇಶ ಕೆ ಬಿ,ಉಪನ್ಯಾಸಕರಾದ ವೀಣಾ ಪಾಟೀಲ, ಮೋಹನ ಕೆ ಎಸ್, ಪ್ರಿಯದರ್ಶಿನಿ ಹೊನ್ನತ್ತಿ, ಭರತ ಬಿ.ಅರ್, ದರ್ಶನ ಕೆ, ಪ್ರಿಯಾ ವೈ.ಬಿ ಮುಂತಾದವರು ಉಪಸ್ಥಿತರಿದ್ದರು.