ತಡೆಗೋಡೆಯಿದ್ದರೂ ಹೆದ್ದಾರಿ ಕುಸಿಯುವ ಭೀತಿ.!

ಜೊಯಿಡಾ: ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ಕಾರವಾರ – ರಾಮನಗರ ಸಂಪರ್ಕಿಸುವ ರಾಜ್ಯ ಹೆದ್ದಾರಿ ಕುಸಿತಗೊಳ್ಳುವ ಆತಂಕ ಎದುರಾಗಿದೆ. ಜೋಯಿಡಾ ತಾಲೂಕಿನ ದೋಣಪಾದ ಸಮೀಪ ರಾಜ್ಯ ಹೆದ್ದಾರಿ 34 ರಲ್ಲಿ ಕುಸಿಯುವ ಭೀತಿಯಿಂದ ಸಿಮೆಂಟ್ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಸಿಮೆಂಟ್ ತಡೆಗೋಡೆಯಿದ್ದರೂ ರಸ್ತೆ ಕುಸಿಯುತ್ತಿದ್ದು ವಾಹನ ಸಂಚಾರಕ್ಕೆ ಕಂಟಕ ಎದುರಾಗುವ ಸಾಧ್ಯತೆ ಇದೆ.