ಗಾಳಿಗೆ ಮರ ಬಿದ್ದು ಮನೆ ಹಾಗೂ ತೋಟಕ್ಕೆ ಹಾನಿ.!

ಕುಮಟಾ: ಭಾರೀ ಗಾಳಿ ಮಳೆಗೆ ಬೃಹತ್ ಮರವೊಂದು ಬಿದ್ದ ಪರಿಣಾಮ ಅಡಿಕೆ ತೋಟ ಮತ್ತು ಮನೆಗೆ ಹಾನಿ ಉಂಟಾದ ಘಟನೆ ತಾಲೂಕಿನ ಗೋಕರ್ಣ ಸಮೀಪದ ಹನೇಹಳ್ಳಿ ಕಳಸದ ಕೇರಿಯಲ್ಲಿ ನಡೆದಿದೆ.

ಗಂಗಾಧರ ನಾಯ್ಕ ಎಂಬುವವರ ತೋಟದಲ್ಲಿ 50 ಕ್ಕೂ ಅಧಿಕ ಫಸಲು ಬರುವ ಅಡಿಕೆ ಮರ ಧರಾಶಾಹಿಯಾಗಿದೆ. ಇದರ ಪಕ್ಕದಲ್ಲಿದ್ದ ನಾಗವೇಣಿ ನಾಯ್ಕ ಎಂಬುವವರ ಮನೆ ಹಾನಿಗೊಳಗಾಗಿದ್ದು ಛಾವಣಿ, ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ. ಸ್ಥಳಕ್ಕೆ ಗ್ರಾಮ ಪಂಚಾಯತ ಉಪಾಧ್ಯಕ್ಷ ಭರತ ಗಾಂವಕರ, ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಮತ್ತು ತೋಟಗಾರಿಕಾ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *