ವಿಶೇಷಚೇತನರಿಗೆ ದ್ವಿಚಕ್ರ ವಾಹನ ವಿತರಣೆ

ಹೊನ್ನಾವರ: ತಾಲೂಕಿನ 10 ವಿಶೇಷಚೇತನರಿಗೆ ತಾ.ಪಂ. ವಿಶೇಷ ನಿಧಿಯಿಂದ ಮಂಜೂರಾದ ದ್ವಿಚಕ್ರವಾಹನವನ್ನು ಶಾಸಕ ಸುನೀಲ ನಾಯ್ಕ ಮಂಗಳವಾರ ವಿತರಿಸಿದರು.

ತಾ.ಪಂ ಆವಾರದದಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಿ ಮಾತನಾಡಿ ವಿಶೇಷಚೇತನರಿಗೆ ಸರ್ಕಾರ ವಿವಿಧ ಸೌಲಭ್ಯ ನೀಡುತ್ತಿದ್ದು, ಸಂಚರಿಸಲು ಅನೂಕೂಲವಾಗಲು ದ್ವಿಚಕ್ರ ವಾಹನ ನೀಡುತ್ತಿದೆ. ಇದುವರೆಗೆ 150 ಕ್ಕೂ ಅಧಿಕ ಫಲಾನುಭವಿಗಳಿಗೆ ನೀಡಿದ್ದು, ಇಂದು 10 ಜನರಿಗೆ ವಿತರಣೆ ಮಾಡಲಾಗಿದೆ. ಕ್ಷೇತ್ರದಲ್ಲಿ ಯಾರದರೂ ವಿಶೇಷಚೇತನರು ಈ ಸೌಲಭ್ಯದಿಂದ ವಂಚಿತರಾದರೆ ಸೂಕ್ತ ದಾಖಲೆಯನ್ನು ಕಛೇರಿಗೆ ನೀಡಿದರೆ ಅವರಿಗೂ ಈ ಸೌಲಭ್ಯ ನೀಡಲಾಗುವುದು. ಅಲ್ಲದೇ ಶಾಸಕ ನಿಧಿಯಿಂದ 25 ಕ್ಕೂ ಹೆಚ್ಚು ವಾಹನ ನೀಡಲು ಅವಕಾಶವಿದೆ. ವಿಶೇಷಚೇತನರು ಇದ್ದಲ್ಲಿ ಕಛೇರಿಗೆ ಅಥವಾ ನನ್ನ ಗಮನಕ್ಕೆ ತಂದಲ್ಲಿ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಇ.ಓ. ಸುರೇಶ ನಾಯ್ಕ, ಪಂ.ಪ. ಅಧ್ಯಕ್ಷ ಶಿವರಾಜ ಮೇಸ್ತ, ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ ಬಿಜೆಪಿ ಕಾರ್ಯಕರ್ತರು ಸಿಬ್ಬಂದಿಗಳು ಹಾಜರಿದ್ದರು.