ಗೇರುಸೊಪ್ಪ ಜಲ ವಿದ್ಯುದಾಗಾರದಲ್ಲಿ ಧ್ವಜಾರೋಹಣ ಮತ್ತು ಅಮೃತಮಹೋತ್ಸವದ ಮೆರವಣಿಗೆ.!

ಹೊನ್ನಾವರ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ವಿದ್ಯತ್ ನಿಗಮ ಗೇರುಸೊಪ್ಪದ ಜಲ ವಿದ್ಯುದಾಗಾರದಲ್ಲಿ ಬೆಳಗ್ಗೆ 7:30 ಕ್ಕೆ ಧ್ವಜಾರೋಹಣ ನಡೆಸಲಾಯಿತು. ಯೋಜನಾ ಪ್ರದೇಶದ ಕಛೇರಿ ಸಂಕೀರ್ಣದಲ್ಲಿ ಅಮೃತಮಹೋತ್ಸವದ ಮೆರವಣಿಗೆ ಬೆಳಗ್ಗೆ 8:15 ಕ್ಕೆ ಪ್ರಾರಂಭವಾಗಿ ಕಾಲೋನಿಯ ಮುಖ್ಯರಸ್ತೆಯಲ್ಲಿ ಡೊಳ್ಳು ಕುಣಿತದೊಂದಿಗೆ ಸಾಗಿ ಕಛೇರಿ ಸಂಕೀರ್ಣದಲ್ಲಿ ಸಮಾಪ್ತಿಗೊಳಸಲಾಯಿತು.

8:45 ಕ್ಕೆ ಯೋಜನಾ ಪ್ರದೇಶದ ಪ್ರಭಾರ ಅಧೀಕ್ಷಕ ಅಭಿಯಂತರಾದ ಶ್ರೀ ಪ್ರಕಾಶ್ ಕುಮಾರ್ ಎಸ್ ಧ್ವಜಾರೋಹಣ ನೆರವೇರಿಸಿದರು. ಕೆ.ಎಸ್.ಐ.ಎಸ್.ಎಫ್ ಸಿಬ್ಬಂದಿಯಿಂದ ಧ್ವಜವಂದನೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಯೋಜನಾ ಪ್ರದೇಶದ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರಾದ ಶ್ರೀಲಕ್ಷಿ ವಿ ಶಂಕರ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಅಭಿಯಂತರರು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಕೆ ಎಸ್ ಐ ಎಸ್ ಎಫ್ ಸಿಬ್ಬಂದಿಗಳು, ಯೋಜನಾ ಪ್ರದೇಶದ ರಕ್ಷಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.