ಝೊಮೆಟೋದಿಂದ ಆಜಾದೀಕಾ ಅಮೃತ್ ಮಹೋತ್ಸವ ಪ್ರಯುಕ್ತ ಬೈಕ್ ರ‍್ಯಾಲಿ.!

ಕಾರವಾರ: ಆಜಾದೀಕಾ ಅಮೃತ್ ಮಹೋತ್ಸವ್ ಹಿನ್ನಲೆಯಲ್ಲಿ ಜಿಲ್ಲೆಯ ಕಾರವಾರದಲ್ಲಿ ಝೊಮೆಟೋ ಆಹಾರ ಪೂರೈಕೆ ಯುವಕರಿಂದ ನಗರದಲ್ಲಿ ರಾಷ್ಟ್ರದ್ವಜ ಹಿಡಿದು ಬೈಕ್ ರ‍್ಯಾಲಿ ನಡೆಸಿದರು.

ನಗರದ ಶಿವಾಜಿ ಸರ್ಕಲ್ ನಿಂದ ಕೋಡಿಬಾಗ್, ನಂದನಗದ್ದ, ಕಾಜೂಬಾಗ್, ಹಬ್ಬುವಾಡ ವರೆಗೆ ಒಟ್ಟು ಎಂಟು ಕಿಲೋಮೀಟರ್ ರ‍್ಯಾಲಿ ನಡೆಸಲಾಯಿತು. 30 ಜನ ಝೊಮೆಟೋ ಡಿಲವರಿ ಬಾಯ್ಸ್ ಗಳು ಇದರಲ್ಲಿ ಭಾಗಿಯಾಗಿದ್ದರು.