ಕುಟುಂಬ ಸೇರಿದ ಪುನೀತ್ ರಾಜಕುಮಾರ ಆಶ್ರಮದಲ್ಲಿ ಆಶ್ರಯ ಪಡೆದ ಗಣೇಶ್.!

ಸಿದ್ದಾಪುರ: ತಾಲೂಕಿನ ಮುಗದೂರಿನ ಪುನೀತ್ ರಾಜಕುಮಾರ ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಗಣೇಶ್ ಎನ್ನುವ ಯುವಕನನ್ನು ಅವರ ತಂದೆ ಹಾಗೂ ತಮ್ಮನ ಜೊತೆ ಕಳುಹಿಸಿಕೊಡಲಾಯಿತು.

ಜುಲೈ 5 ರಂದು ಸಾಗರದ ಗ್ರಾಮಾಂತರ ಠಾಣೆಯ ಪೊಲೀಸರು ಆಶ್ರಮಕ್ಕೆ ಕಳುಹಿಸಿ ಕೊಟ್ಟಿದ್ದರು. ನಂತರ ಯುವಕನ ಕುಟುಂಬ ಹುಡುಕಿ ಸಿದ್ದಾಪುರ ಪೊಲೀಸರ ಸಮಕ್ಷಮದಲ್ಲಿ ಆತನ ಕುಟುಂಬದ ಜೊತೆ ಕಳುಹಿಸಿ ಕೊಡಲಾಯಿತು.

ವಿದ್ಯುತ್ ಒಲೆ ಮಾರಲು ಬಂದಿದ್ದ ವ್ಯಕ್ತಿಯ ಮೂಲಕ ಗಣೇಶನ ಕುಟುಂಬವನ್ನು ಸಂಪರ್ಕಿಸಿ ಶನಿವಾರ ಸಂಜೆ ಸಿದ್ದಾಪುರಕ್ಕೆ ಆಗಮಿಸಿದ್ದ ಗಣೇಶನ ತಂದೆ ತಿಮ್ಮಪ್ಪ ಹಾಗೂ ತಮ್ಮ ಆಂಜನೇಯನ ಜೊತೆ ಊರಿಗೆ ಕಳುಹಿಸಿಕೊಡಲಾಯಿತು.