ಸಿದ್ದಾಪುರ ತಾಲೂಕಿನಾದ್ಯಂತ ಅಬ್ಬರದ ಮಳೆ: ಮನೆಗಳು ಜಲಾವೃತ

ಸಿದ್ದಾಪುರ: ಮಲೆನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು ತಾಲೂಕಿನಾದ್ಯಂತ ಅಬ್ಬರಿಸಿ ಬೊಬ್ಬಿರಿಯುತ್ತಿರುವ ವರುಣನ ಆರ್ಭಟಕ್ಕೆ ವಾಸದ ಮನೆಗಳು ಕುಸಿದು ಹಾನಿಯಾಗಿದೆ.

ತಾಲೂಕಿನ ನೆಜ್ಜೂರು ಹಾರೆಕೊಪ್ಪದ ಮೈಲಿ ಶಿವರಾಮಗೊಂಡ ಅವರ ವಾಸ್ತವ್ಯದ ಮನೆ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ಬಿದ್ದು ಸುಮಾರು 50 ಸಾವಿರ ರೂ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಅರೆಂದೂರಿನ ಕನ್ನೆ ಮಡಿವಾಳ ಎಂಬುವರ ಮನೆ ಮೇಲೆ ಮರ ಬಿದ್ದು ಸುಮಾರು 5 ಸಾವಿರ ರೂ ಹಾನಿಯಾಗಿದೆ ಎಂದು ವರದಿಯಾಗಿದೆ. ಹಸುವಂತೆ ಗ್ರಾಮದ ಲಕ್ಷ್ಮೀ ನಾಯ್ಕ ಎನ್ನುವವರ ಮನೆಯ ಮೇಲ್ಛಾವಣಿ ಕುಸಿದು ಹಾನಿಯಾಗಿದೆ.

ಒಟ್ಟಾರೆ ತಾಲೂಕಿನಲ್ಲಿ ಶುಕ್ರವಾರ 108 ಮಿ.ಮೀ ಮಳೆಯಾಗಿದ್ದು, ಶನಿವಾರವಂತೂ ಇಡೀ ದಿನ ಎಡಬಿಡದೇ ವರುಣ ಅಬ್ಬರಿಸಿದ್ದಾನೆ. ಇನ್ನು ಹಲವೆಡೆ ಕೃಷಿ ಭೂಮಿ ಜಲಾವೃತಗೊಂಡಿದೆ.

Leave a Reply

Your email address will not be published. Required fields are marked *