ಕಳ್ಳಭಟ್ಟಿ ಸಂಗ್ರಹಿಸಿಟ್ಟಿದ್ದ ವ್ಯಕ್ತಿಯ ಬಂಧನ

ಸಿದ್ದಾಪುರ: ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯನ್ನು ಸಂಗ್ರಹಿಸಿಟ್ಟುಕೊಂಡಿದ್ದ ಆರೋಪದ ಮೇಲೆ ಶಿರಸಿ ಅಬಕಾರಿ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ ಘಟನೆ ತಾಲೂಕಿನ ಹಸವಂತೆಯಲ್ಲಿ ನಡೆದಿದೆ.

ಕನ್ನ ನಾಯ್ಕ ಎಂಬ ವ್ಯಕ್ತಿ ಮನೆಯ ಮಲಗುವ ಕೋಣೆಯಲ್ಲಿ 2 ಲೀಟರ್ ಕಳ್ಳಭಟ್ಟಿ ಹಾಗೂ 40 ಲೀಟರ್ ಬೆಲ್ಲದ ಕೊಳೆಯನ್ನು ಸಂಗ್ರಹಿಸಿಟ್ಟುಕೊಂಡಿದ್ದ. ಸ್ವತ್ತಿನ ಒಟ್ಟು ಮೌಲ್ಯ 4,400 ರೂ ಎಂದು ಅಂದಾಜಿಸಲಾಗಿದೆ. ಇನ್ನು ಮಾಲು ಸಮೇತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಬಕಾರಿ ನಿರೀಕ್ಷಕಿ ಜ್ಯೋತಿಶ್ರೀ ನಾಯ್ಕ ನೇತೃತ್ವದಲ್ಲಿ ಉಪ ನಿರೀಕ್ಷಕ ಡಿ.ಎನ್.ಶಿರ್ಸಿಕರ್, ಸಿಬ್ಬಂದಿಗಳಾದ ಪ್ರಸನ್ನ ನೇತ್ರೇಕರ್, ಬಸವರಾಜ ಒಂಟಿ, ಗಂಗಾಧರ ಕಲ್ಲೇದ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.