ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಹೊನ್ನಾವರ: ತಾಲೂಕಿನ ಬಾಳೆಗದ್ದೆಯ ಶ್ರೀ ವೆಂಕ್ರಟಮಣ ದೇವಾಲಯದಲ್ಲಿ ಶ್ರೀನಿಧಿ ಸೇವಾ ವಾಹಿನಿಯ ವತಿಯಿಂದ ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಡಾನ್ಸ ಕಾರ್ಯಕ್ರಮ ನಡೆಯಿತು.

ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಗಾಣಿಗ ಸಮುದಾಯ ಎಲ್ಲರೊಂದಿಗೆ ಹೊಂದಿಕೊಂಡು ಹೊಗಿದೆ. ಎಲ್ಲ ಸಮಾಜದವರನ್ನು ಪ್ರೀತಿಸುವುದರಿಂದಲೇ ನಮ್ಮ ಸಮಾಜ ಇಂದು ಈ ಮಟ್ಟದ ಗೌರವವನ್ನು ಪಡೆದಿದೆ ಎಂದರು.

ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಉದ್ದಿಮೆದಾರ ರವಿಕುಮಾರ ಶೆಟ್ಟಿ ಮಾತನಾಡಿ ಸಣ್ಣ ಸಮಾಜಕ್ಕೆ ಶಿಕ್ಷಣ ದೊರೆತಾಗ ಮುಂದೆ ಬರಲಿದೆ. ರಾಜಕೀಯವಾಗಿ, ಸಾಮಾಜಿಕವಾಗಿ, ಉದ್ದಿಮೆ ರಂಗದಲ್ಲಿ ಸಾಧನೆ ಮಾಡಿದ್ದರೂ, ಶೈಕ್ಷಣಿಕವಾಗಿ ನಿರೀಕ್ಷಿತ ಮಟ್ಟದ ಸಾಧನೆ ಸಾಧ್ಯವಾಗಿಲ್ಲ. ಐ.ಎ.ಎಸ್. ಕೆ.ಎ.ಎಸ್ ಅಧ್ಯಯನ ಮಾಡುವರಿಗೆ ಪೊತ್ಸಾಹಿಸಿ ಆ ರಂಗದಲ್ಲಿಯೂ ಸಾಧನೆ ಮಾಡಬೇಕಿದೆ ಎಂದರು.

ಸಂಘದ ಅಧ್ಯಕ್ಷ ಕೇಶವ ಶೆಟ್ಟಿ, ವಿದ್ಯುತ್ ಗುತ್ತಿಗೆದಾರ ಎಸ್.ಕೆ.ಶೆಟ್ಟಿ, ಎ.ಎಸ್.ಐ ಗಿರೀಶ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.