ಗದ್ದೆಯಲ್ಲಿ ವಿಷಕಾರಿ ಹಾವು ಕಚ್ಚಿದ ಪರಿಣಾಮ ರೈತನ ಸ್ಥಿತಿ ಗಂಭೀರ

ಭಟ್ಕಳ: ಶೇಂಗಾ ಗದ್ದೆಗೆ ಔಷಧಿ ಸಿಂಪಡಿಸುವಾಗ ವಿಷಕಾರಿ ಹಾವೊಂದು ಕಚ್ಚಿದ ಪರಿಣಾಮ ರೈತನೊರ್ವ ಗಂಭೀರವಾಗಿ ಅಸ್ವಸ್ಥಗೊಂಡ ಘಟನೆ ಭಟ್ಕಳದಲ್ಲಿ ನಡೆದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿರುವ ಘಟನೆ 10.30ರ ಸುಮಾರಿಗೆ ನಡೆದಿದೆ

ಅಸ್ವಸ್ಥಗೊಂಡ ರೈತನನ್ನು ರವಿ ಮಂಜುನಾಥ ನಾಯ್ಕ ತಾಲೂಕಿನ ಮುರ್ಡೇಶ್ವರ ಬೆದ್ರಮನೆ ನಿವಾಸಿ ಎಂದು ತಿಳಿದು ಬಂದಿದೆ. ಈತ ಬೆಳಿಗ್ಗೆ 10.30ರ ಸುಮಾರಿಗೆ ತಮ್ಮ ಶೇಂಗಾ ಬೆಳೆಯುವ ಗದ್ದೆಯಲ್ಲಿ ಔಷಧಿ ಸಿಂಪಡಿಸುವಾಗ ವಿಷಕಾರಿ ಹಾವೊಂದು ಕಚ್ಚಿದೆ. ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿಗೆ ಕಳುಹಿಸಲಾಗಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಇನ್ನಷ್ಟೆ ಪ್ರಕರಣ ದಾಖಲಾಗಬೇಕಿದೆ