ಹೊಸೂರಿನ ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ

ಹಳಿಯಾಳ : ವಿಶ್ವ ಕನ್ನಡಿಗರ ರಕ್ಷಣಾ ವೇದಿಕೆ ಸಿಂಹ ಘರ್ಜನೆ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೃಷ್ಣ ಮಾರುತಿ ಹುಲಸ್ವಾರ್ ಅವರ ನೇತೃತ್ವದಲ್ಲಿ ತಾಲೂಕಿನ ಹೊಸೂರಿನ ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಗೆ ನೋಟು ಬುಕ್, ಪೆನ್, ಪೆನ್ಸಿಲ್ ಮೊದಲಾದ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯ್ತು.

ಈ ಸಂದರ್ಭದಲ್ಲಿ ರೈತ ಘಟಕ ಅಧ್ಯಕ್ಷರಾದ ಬೆನಿತ್ ದೇಸಾಯಿ, ಪ್ರಮುಖರಾದ ಬಾಬುಸಾಬ ಕಕ್ಕೇರಿ, ಮಂಗಲಾ ಕೃಷ್ಣ ಹುಲಸ್ವಾರ್, ದಿಲಶಾದ್ ಅಲ್ಲಾಸಾಬ್ ಮುಲ್ಲಾ, ದ್ಯಾಮವ್ವ ವಡ್ಡರ್, ಗಾಯತ್ರಿ ವಡ್ಡರ್ ಮೊದಲಾದವರು ಉಪಸ್ಥಿತರಿದ್ದರು