ಅಖಂಡ ಹರಿನಾಮ ಸಪ್ತಾಹದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಭಾಗಿ

ಹಳಿಯಾಳ : ನಗರದ ಗಣೇಶ ನಗರದಲ್ಲಿರುವ ಸಂತ ಶ್ರೀ.ಜ್ಞಾನೇಶ್ವರ ಶ್ರೀ ಸಿದ್ದೇಶ್ವರ ಮಂದಿರದಲ್ಲಿ ತಾಲೂಕಿನ ವಾರಕರಿ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ 6 ನೇ ಅಖಂಡ ಹರಿನಾಮ ಸಪ್ತಾಹ ಗ್ರಂಥರಾಜ ಶ್ರೀ.ಜ್ಞಾನೇಶ್ವರ ಪಾರಾಯಣ ಹಾಗೂ ನಾಟ್ಯ ಭಜನೆ ಪಾರಾಯಣ ಸೋಹಳಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸುನೀಲ್ ಹೆಗಡೆ ಅವರು ಶನಿವಾರ ಪಾಲ್ಗೊಂಡು, ದೇವರ ದರ್ಶನವನ್ನು ಪಡೆದರು.

ಇದೆ ವೇಳೆ ಟ್ರಸ್ಟ್ ಕಮೀಟಿ ವತಿಯಿಂದ ಸುನೀಲ್ ಹೆಗಡೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಸಂತೋಷ ಘಟಕಾಂಬಳೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಮುತ್ನಾಳೆ, ಸ್ಥಳೀಯರಾದ ಪ್ರಿತೇಶ ಪವಾರ‌ ಮೊದಲಾದವರು ಉಪಸ್ಥಿತರಿದ್ದರು.