ಭಟ್ಕಳದಲ್ಲಿ ಕರ್ತವ್ಯಕ್ಕೆ ತೆರಳಿದ್ದ ವೈದ್ಯರು ನಾಪತ್ತೆ – ಗ್ರಾಮೀಣ ನಗರ ಠಾಣೆಯಲ್ಲಿ ದೂರು ದಾಖಲು

ಭಟ್ಕಳ:- ಕರ್ತವ್ಯಕ್ಕೆ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋದ ವೈದ್ಯರೋರ್ವರು ಮರಳಿ ಮನೆಗೂ ಬರದೆ, ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾದ ಘಟನೆ ಭಟ್ಕಳದಲ್ಲಿ ನಡೆದಿದೆ. ನಾಪತ್ತೆಯಾದ ವೈದ್ಯರನ್ನು ಎಚ್.ಟಿ ಉಮೇಶ ಎಂದು ಗುರುತಿಸಲಾಗಿದೆ. ಉಮೇಶ್‌ ಭಟ್ಕಳದ ಡಿ.ಪಿ ಕಾಲೊನಿಯ ನಿವಾಸಿಯಾಗಿದ್ದು, ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು…

ಅ.10 ರ ಬೆಳ್ಳಿಗ್ಗೆ ತನ್ನ ಮನೆಯಿಂದ ಕರ್ತವ್ಯಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವರು ಕರ್ತವ್ಯದಿಂದ ಮರಳಿ ಮನೆಗೆ ಬಾರದೆ, ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ ಎಂದು ವೈದ್ಯರ ಪತ್ನಿ, ಗ್ರಾಮೀಣ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಉದಯ್‌ ನಾಯ್ಕ, ನುಡಿಸಿರಿ ನ್ಯೂಸ್‌, ಭಟ್ಕಳ