ದಾಂಡೇಲಿ ನಗರದ ಪಟೇಲ್ ನಗರದಲ್ಲಿ ಅತಿಕ್ರಮಿತ ಕಟ್ಟಡದ ತೆರವು ಕಾರ್ಯಾಚರಣೆ

ದಾಂಡೇಲಿ : ನಗರದ ಪಟೇಲ್ ನಗರದಲ್ಲಿರುವ ಅಂಗನವಾಡಿಯ ಹತ್ತಿರ ಅತಿಕ್ರಮಿಸಿಕೊಂಡು ಕಟ್ಟಿದ ಕಟ್ಟಡವೊಂದನ್ನು ನಗರ ಸಭೆಯ ವತಿಯಿಂದ ತೆರವುಗೊಳಿಸಿದ ಘಟನೆ ಇಂದು ಮಂಗಳವಾರ ನಡೆದಿದೆ.

ಪಟೇಲ್ ನಗರದ ಅಂಗನವಾಡಿ ಹತ್ತಿರ ಜಾಗವನ್ನು ಅತಿಕ್ರಮಿಸಿಕೊಂಡು ಕಟ್ಟಡವೊಂದನ್ನು ನಿರ್ಮಿಸಲಾಗಿತ್ತು. ಅತಿಕ್ರಮಿತ ಕಟ್ಟಡವನ್ನು ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರ ನಿರ್ದೇಶನದಲ್ಲಿ ನಗರ ಸಭೆಯ ಆರೋಗ್ಯ ನಿರೀಕ್ಷೆಕರಾದ ವಿಲಾಸ್ ದೇವಕರ ನೇತೃತ್ವದಲ್ಲಿ ನಗರ ಸಭೆಯ ಪೌರಕಾರ್ಮಿಕರ ಮೂಲಕ ತೆರವು ಮಾಡಲಾಯ್ತು.