ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಗರಸಭೆಯ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹದ ಕುರಿತಂತೆ ಅ: 10 ರಂದು ಡಿಸಿಯವರಿಗೆ ಮನವಿ ಸಲ್ಲಿಕೆ

ದಾಂಡೇಲಿ : ಜಿ+2 ಆಶ್ರಯ ಮನೆ ವಿತರಣೆ ಹಾಗೂ ಇನ್ನಿತರ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಕ್ಟೋಬರ್ 25ರಂದು ದಾಂಡೇಲಿ ನಗರಸಭೆಯ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳುವುದರ ಬಗ್ಗೆ ಅಕ್ಟೋಬರ್ 10 ರಂದು ನಗರಸಭೆಯ ಪೌರಾಯುಕ್ತರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಗುವುದು ಎಂದು ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂ ಖಾನ್ ಅವರು ಹೇಳಿದರು.