ಜೋಯಿಡಾ ಜಗಲ್ಬೇಟ್ ಶ್ರೀ.ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದುರ್ಗಾಮಾತಾ ದೌಡ್ ಬಗ್ಗೆ ಪೂರ್ವಭಾವಿ ಸಭೆ

ಜೋಯಿಡಾ : ದುರ್ಗಾಮಾತಾ ದೌಡ್ ಕಾರ್ಯಕ್ರಮವನ್ನು ಆಯೋಜಿಸುವ ನಿಟ್ಟಿನಲ್ಲಿ ತಾಲೂಕಿನ ಜಗಲ್ಬೇಟ್ ನ ಶ್ರೀ.ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆಯು ಜರುಗಿತು.

ಶಿವಪ್ರತಿಷ್ಠಾನ ಹಿಂದೂಸ್ಥಾನ ಬೆಳಗಾವಿಯ ಪ್ರವಚನಕಾರ ಹಾಗೂ ಸಿದ್ಧೇಶ್ವರ ಗೋಶಾಲೆಯ ಸಂಸ್ಥಾಪಕರಾದ ಹಿರಮಣಿ ದಾದಾ ಮುಚ್ಚಂಡಿಕರ್ ಅವರು ದುರ್ಗಾಮಾತಾ ದೌಡ್ ಕಾರ್ಯಕ್ರಮದ ಆಯೋಜನೆಯ ಉದ್ದೇಶವನ್ನು ವಿವರಿಸಿದರು.

ಕಳೆದ ವರ್ಷದಿಂದ ಜಗಲಬೆಟ್ ನಲ್ಲಿ ದುರ್ಗಾಮಾತಾ ದೌಡ್ ಆಯೋಜಿಸಲಾಗುತ್ತಿದೆ. ಮೊದಲ ವರ್ಷವೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಯುವಕರಲ್ಲಿ ಹೊಸ ಹುಮ್ಮಸ್ಸು ಸೃಷ್ಟಿಯಾಗಿದೆ. ಯುವಕರಿಗೆ ಮಾರ್ಗದರ್ಶನ ನೀಡುವಾಗ ಹಿರಮಣಿ ದಾದಾ ಅವರು ದುರ್ಗಾಮಾತಾ ಇತಿಹಾಸ, ಅದರ ಮಹತ್ವ ಮತ್ತು ಅದನ್ನು ಹೇಗೆ ಸಂಘಟಿಸಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ಹಿರಮಣಿ ದಾದಾ ಅವರನ್ನು ಸನ್ಮಾನಿಸಲಾಯಿತು. ದೇವರ ನಾಡು, ಧರ್ಮಕ್ಕಾಗಿ ಎಲ್ಲರೂ ದುಡಿಯಬೇಕು ಎಂದರು.