ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ, ಹಣ ಜಮಾವಾಗದಿದ್ದ ಫಲಾನುಭವಿಗಳು ಹತ್ತಿರದ ಅಂಗನವಾಡಿ ಕಾರ್ಯಕರ್ತರೆಯರನ್ನು ಸಂಪರ್ಕಿಸಿ‌

ಹಳಿಯಾಳ : ಸರಕಾರದ ಮಹತ್ವಕಾಂಕ್ಷಿ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ, ಆಧಾರ್ ಲಿಂಕ್ ಮಾಡದಿರುವುದು, ಇಕೆವೈಸಿ ಮಾಡದಿರುವುದು, ಆಧಾರ್ ಲಿಂಕ್ ಜೋಡಣೆ ಮಾಡಿದ ನಂತರ ಉಳಿತಾಯ ಖಾತೆಯನ್ನು ಆಕ್ಟಿವೇಶನ್ ಮಾಡದೇ ಇರುವುದರಿಂದ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿರುವುದಿಲ್ಲ. ಹಾಗಾಗಿ ಹಳಿಯಾಳ ಮತ್ತು ದಾಂಡೇಲಿ ತಾಲೂಕಿನಲ್ಲಿ ಒಟ್ಟು 5475 ಫಲಾನುಭವಿಗಳಿಗೆ ಹಣ ಜಮಾವಾಗಿರುವುದಿಲ್ಲ. ಈ ಫಲಾನುಭವಿಗಳು ಕೂಡಲೇ ಆಧಾರ್ ಲಿಂಕ್ ಮಾಡುವುದು. ಇಕೆವೈಸಿ ಮಾಡುವುದು ಮತ್ತು ಆಧಾರ್ ಲಿಂಕ್ ಜೋಡಣೆ ಮಾಡಿದ ನಂತರ ಉಳಿತಾಯ ಖಾತೆಯನ್ನು ಆಕ್ಟಿವೇಶನ್ ಮಾಡಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರನ್ನು ಸಂಪರ್ಕಿಸುವಂತೆ ಹಳಿಯಾಳ ಪಟ್ಟಣದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ. ಲಕ್ಷ್ಮಿದೇವಿ ಅವರು ಗುರುವಾರ ಮಾಧ್ಯಮದ ಮೂಲಕ ಮನವಿಯನ್ನು ಮಾಡಿದ್ದಾರೆ.