ಹಬ್ಬದ ದಿನವೇ ಮನೆಗೆ ಎಂಟ್ರಿ ಕೊಟ್ಟ ನಾಗರಾಜ.! ಹಾವು ಕಂಡು ಬೆಚ್ಚಿಬಿದ್ರು ಜನ.!

ಶಿರಸಿ: ತಾಲೂಕಿನ ಬಿಸಲಕೊಪ್ಪ ಹತ್ತಿರದ ಕುಪ್ಪಳ್ಳಿ ಗ್ರಾಮದ ಹರೀಶ ಭೀಮಾ ನಾಯ್ಕ ಅವರ ಮನೆಯಲ್ಲಿ ಶುಕ್ರವಾರ ರಾತ್ರಿ ಹತ್ತು ಗಂಟೆ ವೇಳೆ ನಾಗರ ಹಾವೊಂದು ಕಾಣಿಸಿಕೊಂಡು ಮನೆಯವರಲ್ಲಿ ಭಯ ಮೂಡಿಸಿತ್ತು. ನಂತರ ಸ್ಥಳಿಯರು ಸ್ನೇಕ್ ಸ್ಟಾರ್ ಪ್ರಶಾಂತ ಹುಲೆಕಲ್ ಅವರಿಗೆ ಕರೆ ಮಾಡಿದರು. ರಾತ್ರಿ ಸ್ಥಳಕ್ಕಾಗಮಿಸಿದ ಪ್ರಶಾಂತ್ ನಾಗರ ಹಾವನ್ನ ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾದರು.