ಈಜಲು ಹೋಗಿ ನೀರುಪಾಲಾದ ಯುವಕ

ಶಿರಸಿ: ವರದಾ ನದಿಯಲ್ಲಿ ಈಜಲು ಹೋಗಿ ಯುವಕನೊಬ್ಬ ನೀರಿನಲ್ಲಿ ಮುಳಗಿ ಸಾವನ್ನಪ್ಪಿದ ಘಟನೆ ಬನವಾಸಿ ಮೊಗಳ್ಳಿಯ ಬಾಷಿಯಲ್ಲಿ ನಡೆದಿದೆ. ಗ್ರಾಮದ ಸೀತಾರಾಮ್ ಮಧುಕೇಳ್ವರ ಮಡಿಯಾಳ್ (18) ಮೃತ ಯುವಕ.

ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರ ನೆರವಿನಿಂದ ನದಿಯಲ್ಲಿ ಮುಳಗಿದ್ದ ಶವ ಮೇಲಕ್ಕೆ ತರಲಾಯಿತು. ಇನ್ನು ಈ ಬಗ್ಗೆ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.