ಶಿರಸಿಯಲ್ಲಿ ಅಬ್ಬರದ ಮಳೆ: ಜನಜೀವನ ಅಸ್ತವ್ಯಸ್ಥ

ಶಿರಸಿ: ಶನಿವಾರ ಮಧ್ಯಾಹ್ನದ ಬಳಿಕ ನಗರದಲ್ಲಿ ಒಮ್ಮೆಲೇ ಅಬ್ಬರದ ಮಳೆ ಆರಂಭವಾಗಿದೆ. ವರುಣನ ಆರ್ಭಟದಿಂದಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಶನಿವಾರವಾದ್ದರಿಂದ ಶಾಲಾ ಕಾಲೇಜುಗಳು ಅರ್ಧ ದಿನ ನಡೆದಿದ್ದು, ಬಳಿಕ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಲು ತೊಂದರೆ ಉಂಟಾಯಿತು.

ನಗರದ ಹಳೆ ಬಸ್ ನಿಲ್ದಾಣ ಕೆಸರಿನಿಂದ ಸಂಪೂರ್ಣ ಆವೃತಗೊಂಡಿದೆ. ನಿಲ್ದಾಣದಲ್ಲಿ ಮಳೆಯಿಂದಾಗಿ ಜಾರುವ ಸ್ಥಿತಿ ಉಂಟಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಪಕ್ಕದಲ್ಲಿ ಶೆಡ್ ಮಾಡಲಾಗಿದ್ದರೂ ಎಲ್ಲರೂ ಅಲ್ಲೇ ಆಗಮಿಸಿದ್ದರಿಂದ ನಿಲ್ಲಲು ಸ್ಥಳ ಇಲ್ಲದೇ ಪರದಾಡುವಂತಾಗಿದೆ. ನಗರದ ಸಾಮ್ರಾಟ್ ಎದುರು ಹಾಗೂ ವಿವಿಧೆಡೆ ರಸ್ತೆಯ ಮೇಲೆ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಅನಿರೀಕ್ಷಿತವಾಗಿ ಮಳೆ ಸುರಿದಿದ್ದರಿಂದ ತೊಂದರೆ ಅನುಭವಿಸುವಂತಾಯಿತು.