ಶಿರಸಿಯಲ್ಲಿ ಗಾಂಜಾ ಪೆಡ್ಲರ್ ಗಳ ಬಂಧನ.!

ಶಿರಸಿ: ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಗಾಂಜಾ ಪೆಡ್ಲರ್ ಗಳನ್ನು ಮಾಲು ಸಮೇತ ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಗರದ ಆನೆಹೊಂಡ ಹತ್ತಿರದ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಹುಲೇಕಲ್ ರಸ್ತೆಯ ರಾಮನಗರದ ನವೀನ್ ರಾಮಚಂದ್ರ ಚೌವಾಣ್ ಹಾಗೂ ಗಣೇಶ ನಗರದ ನಿಖಿಲ್ ನಾಗೇಶ್ ಗೌಡ ಬಂಧಿತ ಆರೋಪಿಗಳು.

ಆರೋಪಿಗಳು ನಗರದ ಆನೆಹೊಂಡ ಹತ್ತಿರದ ಅರಣ್ಯ ಪ್ರದೇಶದ ಕಚ್ಚಾ ರಸ್ತೆಯ ಮೇಲೆ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ನಗರ ಠಾಣೆ ಪೊಲೀಸರು ಆರೋಪಿತರಿಂದ 1ಕೆಜಿ 54ಗ್ರಾಂ ಗಾಂಜಾ ವನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ರವಿನಾಯ್ಕ ಸಿಪಿಐ ರಾಮಚಂದ್ರ ನಾಯಕ್ ನಗರಠಾಣೆ ಪಿಎಸ್ಐ ರಾಜಕುಮಾರ್ ಉಕ್ಕಲಿ, ರತ್ನಾ ಎಸ್ ಕೆ ಹಾಗೂ ಸಿಬ್ಬಂದಿಗಳಾದ ಅಶೋಕ್ ರಾಠೋಡ್, ವಿಶ್ವನಾಥ್ ಬಂಢಾರಿ,ಮಧುಕರ ಗಾಂವ್ಕರ್, ಶಿವು ಉಮ್ಮಚಗಿ, ನಾಗಪ್ಪ ಲಮಾಣಿ , ಪ್ರವೀಣ್ ಎನ್ , ಅರುಣ ಲಮಾಣಿ ಸೇರಿ ಹಲವರು ಭಾಗವಹಿಸಿದ್ದರು. ಈ ಕುರಿತು ಶಿರಸಿ ನಗರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.