ಡಿಸೆಂಬರ್‌ 24 ರಂದು ಶಿರಸಿಯಲ್ಲಿ ವೆಂಕಟರಮಣ ಹೆಗಡೆ ಕವಲಕ್ಕಿ ನೇತೃತ್ವದಲ್ಲಿ ಅನಂತಕುಮಾರ್‌ ಹೆಗಡೆ ಚುನಾವಣೆಗೆ ಸ್ಪರ್ಧಿಸುವಂತೆ ಹಕ್ಕೊತ್ತಾಯ.

ಸಂಸದ ಅನಂತಕುಮಾರ್‌ ಹೆಗಡೆ ಅವರು ಸಕ್ರೀಯ ರಾಜಕೀಯಕ್ಕೆ ಬಂದು, ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿ, ಶ್ರೀಕುಮಾರ ರೋಡ್‌ ಲೈನ್ಸ್‌ ಮುಖ್ಯಸ್ಥ ವೆಂಕಟರಮಣ ಹೆಗಡೆಯವರ ನೇತೃತ್ವದಲ್ಲಿ ಅನಂತ ಕುಮಾರ್‌ ಹೆಗಡೆ ಅಭಿಮಾನಿ ಬಳಗದವರು, ಡಿಸೆಂಬರ್‌ 24 ರಂದು ಅವರ ಶಿರಸಿ ನಿವಾಸಕ್ಕೆ ತೆರಳಿ ಹಕ್ಕೊತ್ತಾಯ ನಡೆಸಲಿದ್ದಾರೆ.

ಅನಂತ ಕುಮಾರ್‌ ಹೆಗಡೆ ಪ್ರಸ್ತುತ ರಾಜಕೀಯವಾಗಿ ಸಕ್ರೀಯವಾಗಿ ಇರದೇ ಇರುವುದು ಅವರ ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ. ತನ್ನಿಮಿತ್ತ  ಅವರ ಅಭಿಮಾನಿ ಬಳಗದವರು ಅವರನ್ನು ರಾಜಕೀಯವಾಗಿ ಸಕ್ರೀಯಗೊಳಿಸಲು, ಎಸ್‌ಆರ್‌ಎಲ್‌ ಸಮೂಹ ಸಂಸ್ಥೆಯ ಮುಖ್ಯಸ್ಥ  ವೆಂಕಟರಮಣ ಹೆಗಡೆ ನೇತೃತ್ವದಲ್ಲಿ ಅನಂತ ಕುಮಾರ್‌ ಹೆಗಡೆಯವರ ಮನೆಗೇ ತೆರಳಿ ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಲು ನಿರ್ಧರಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರೀಯಿಸಿದ ವೆಂಕಟರಮಣ ಹೆಗಡೆ, ದೇಶದ ಹಿತಕ್ಕೆ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗಬೇಕು. ಉತ್ತರಕನ್ನಡದಲ್ಲಿ ಅನಂತ ಕುಮಾರ್‌ ಹೆಗಡೆಯವರೇ ಸಂಸದರಾಗಬೇಕು. ಇದರಿಂದ ರಾಷ್ಟ್ರ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಎರಡರ ಭವಿಷ್ಯವೂ ಇನ್ನಷ್ಟು ಉಜ್ವಲವಾಗಲಿದೆ. ಎಂದು ಹೇಳಿದ್ದಾರೆ.