ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭ

ಕಾರವಾರ: ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘ(ರಿ)ದ ಉದ್ಘಾಟನಾ ಸಮಾರಂಭ ಶನಿವಾರ 23-12-2023ರಂದು ಕಾರವಾರದ ಸಾಗರ ದರ್ಶನ ಸಭಾಭವನದಲ್ಲಿ ನಡೆಯಲಿದೆ.
ಕಾರವಾರ ಅಂಕೋಲಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹರಿಕಂತ್ರ ಸಮಾಜದ ಹಿರಿಯ ಧುರೀಣ ಪಿ.ಎಂ. ತಾಂಡೇಲ್,
ಜಿಲ್ಲಾ ಹರಿಕಂತ್ರ ಮಹಜನ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಗೌರವಾಧ್ಯಕ್ಷ ಗಣಪತಿ ಮಾಂಗ್ರೆ, ಕಾರ್ಯದರ್ಶಿ ಟಿ ಬಿ ಹರಿಕಂತ್ರ, ಸಂಘದ ಅಧ್ಯಕ್ಷ ರೋಷನ್ ಹರಿಕಂತ್ರ, ಗೌರವಾಧ್ಯಕ್ಷ ದಿಲೀಪ್ ಅರ್ಗೇಕರ್, ನೌಕರ ಘಟಕದ ಅಧ್ಯಕ್ಷ ಮಿಥುನ್ ತಾಂಡೇಲ್. ಅಥಿತಿಗಳಾಗಿ ಉದ್ಯಮಿ ಆನಂದು ಹರಿಕಂತ್ರ, ಉದ್ಯಮಿ ನಾಗಪ್ಪ ಹರಿಕಂತ್ರ, ಮಹಿಳಾ ಮುಖಂಡೆ ಸುಶೀಲಾ ಹರಿಕಂತ್ರ, ರಾಜೇಶ್ವರಿ ಕೇಣಿಕರ, ಮಾಜಿ ಸೈನಿಕ ಶ್ರೀಧರ್ ಚೌಗಲೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಹರಿಹರ ಹರಿಕಂತ್ರ, ಉಮಾಕಾಂತ ಹೊಸ್ಕಟ್ಟ, ನಾಗಪ್ಪ ಹರಿಕಂತ್ರ, ಶಿಕ್ಷಕ ಶಂಕರ ಹರಿಕಂತ್ರ ಇವರಿಗೆ ಸನ್ಮಾನ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರೋತ್ಸಾಹ ನಡೆಯಲಿದೆ.
ಎಲ್ಲಾ ಹರಿಕಂತ್ರ ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಹಾಜರಿರಲು ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಮಾರುತಿ ಹರಿಕಂತ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.