ಜೋಯಿಡಾ ತಾಲ್ಲೂಕಿನ ಉಳವಿ -ಕುಂಬಾರವಾಡ ರಸ್ತೆಯಲ್ಲಿ ದ್ವಿಚಕ್ರ ವಾಹನ ಅಪಘಾತ : ಇಬ್ಬರಿಗೆ ಗಾಯ, ದೂರು ದಾಖಲು

ಜೋಯಿಡಾ : ತಾಲೂಕಿನ ಉಳವಿ – ಕುಂಬಾರವಾಡ ರಸ್ತೆಯಲ್ಲಿ ದ್ವಿಚಕ್ರ ವಾಹನವೊಂದಕ್ಕೆ ಇನ್ನೊಂದು ದ್ವಿಚಕ್ರ ವಾಹನ ಹಿಂದಿನಿಂದ ಬಂದು ಡಿಕ್ಕಿಯಾಗಿ, ಇಬ್ಬರಿಗೆ ಗಾಯವಾದ ಘಟನೆ ನಡೆದಿದ್ದು, ಈ ಬಗ್ಗೆ ಜೋಯಿಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಧಾರವಾಡದ ಮಾರಡಗಿ ಗ್ರಾಮದ ನಿವಾಸಿ ಮಂಜೂರ್ ಆಲಿ ಹಸನಸಾಬ್ ಸವಣೂರು ಮತ್ತು ಸಚಿನ್ ಮರೆಪ್ಪ ತಳವಾರ್ ಎಂಬಿಬ್ಬರು ಉಳವಿ – ಕುಂಬಾರವಾಡ ರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಹಿಂದುಗಡೆಯಿಂದ ಅತಿಯಾದ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದ ದ್ವಿಚಕ್ರ ವಾಹನವೊಂದು ಹಿಂದುಗಡೆಯಿಂದ ಡಿಕ್ಕಿ ಮಾಡಿದೆ. ಈ ಸಂದರ್ಭದಲ್ಲಿ ಈ ಇಬ್ಬರಿಗೂ ಗಂಭೀರ ಗಾಯವಾಗಿದೆ. ಅಪಘಾತ ಪಡಿಸಿದ ವ್ಯಕ್ತಿ ಧಾರವಾಡದ ಮಾರಡಗಿ ನಿವಾಸಿ ವಿಜಯ್ ಕುಮಾರ್ ಮಲ್ಲಪ್ಪ ಹುಬ್ಬಳ್ಳಿ ಈತನ ಮೇಲೆ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳುವಂತೆ ಜೋಯಿಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.