ಜೋಯಿಡಾ – ಕಾರವಾರ ರಾಜ್ಯ ರಸ್ತೆಯ ಚೌಕನ ಗಾಳಿ ಕ್ರಾಸ್ ಹತ್ತಿರ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ದ್ವಿಚಕ್ರ ವಾಹನ‌ : ಸವಾರ ಸಾವು

ಜೋಯಿಡಾ : ಶ್ರೀ.ಕ್ಷೇತ್ರ ಉಳವಿಗೆ ಹೋಗಿ ಹಿಂದುರುಗಿ ಬರುತ್ತಿದ್ದಾಗ ದ್ವಿಚಕ್ರ ವಾಹನವೊಂದು ಸವಾರನ ಅತೀಯಾದ ವೇಗ ಮತ್ತು ಅಜಾಗರೂಕತೆಯ ಚಾಲನೆಯ ಪರಿಣಾಮವಾಗಿ ಚೌಕನ ಗಾಳಿ ಕ್ರಾಸ್ ಹತ್ತಿರ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತ ದ್ವಿಚಕ್ರ ವಾಹನ ಸವಾರ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ ಕೆ ಹುಬ್ಬಳ್ಳಿ ಗ್ರಾಮದ ಸಿದ್ದನಗೌಡ ವಿಠಲ ಪಟ್ಟಣಶೆಟ್ಟಿ ಎಂಬಾತನಾಗಿದ್ದಾನೆ. ಈತ ತನ್ನ ದ್ವಿಚಕ್ರ ವಾಹನ ಕೆಎ 22 ಎಚ್ಎಫ್ 71 78ದಲ್ಲಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಇದೇ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರನಾಗಿದ್ದ ವೀರಣ್ಣ ಗೌಡ ಪಟ್ಟಣ ಶೆಟ್ಟಿ ಎಂಬಾತನಿಗೂ ಗಂಭೀರ ಗಾಯವಾಗಿದೆ. ಈ ಬಗ್ಗೆ ಜೋಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.