ಸಿದ್ದಾಪುರದ ಸುಭಾಷ್ ಚಂದ್ರ ಬೋಸ್‌ ಕ್ರೀಡಾಂಗಣದಲ್ಲಿ ತಾಲೂಕು ಪತ್ರಕರ್ತ ಸಂಘದ ಸೌಹಾರ್ಧ ಕ್ರಿಕೆಟ್‌ ಪಂದ್ಯಾವಳಿ ಸಮಾರೋಪ ಸಮಾರಂಭ


ಸಿದ್ದಾಪುರದ ಸುಭಾಷ್ ಚಂದ್ರ ಬೋಸ್‌ ಕ್ರೀಡಾಂಗಣದಲ್ಲಿ ತಾಲೂಕು ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಸೌಹಾರ್ಧ ಕ್ರಿಕೆಟ್‌ ಪಂದ್ಯಾವಳಿಯ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಜಾತಿ ಧರ್ಮದ ಭೇದವಿಲ್ಲದೆ ಎಲ್ಲರೂ ಒಂದಾಗಿ ತೊಡಗಿಕೊಳ್ಳುವ ಕ್ಷೇತ್ರವೆಂದರೆ ಅದು ಕ್ರೀಡೆ, ಇಲ್ಲಿ ನಾವು ಸಾಧನೆಗೆ ಮಹತ್ವವನ್ನ ನೀಡುತ್ತೇವೆ ಹಾಗೂ ಒಗ್ಗಟ್ಟನ್ನು ಸಾಧಿಸಲು ಕ್ರೀಡೆ ದೊಡ್ಡ ಸಾಧನವಾಗಿದೆ. ಎಂದು ಅರಣ್ಯ ಅತಿಕ್ರಮಣ ಹೋರಾಟ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ್ ಹೇಳಿದ್ರು..

2 ದಿನಗಳ ಕಾಲ ನಡೆದ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಹಕಾರಿ ಇಲಾಖೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ರೆ ಪತ್ರಕರ್ತ ಸಂಘ ದ್ವಿತೀಯ ಸ್ಥಾನ ಪಡೆಯಿತು.

ಈ ವೇಳೆ ತಹಶೀಲ್ದಾರ್ ಎಮ್ ಆರ್ ಕುಲಕರಣಿ, ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಕೆ., ಪಿಎಸ್ಐ ಅನಿಲ್, ಪತ್ರಕರ್ತ ಸಂಘದ ಅಧ್ಯಕ್ಷ ಗಂಗಾಧರ್ ಕೊಳಗಿ, ನಿವೃತ್ತ ಪಶುವೈದ್ಯಾಧಿಕಾರಿ ನಂದ್ ಕುಮಾರ್ ಪೈ ಮತ್ತಿತರರು ಉಪಸ್ಥಿತರಿದ್ರು..