ಸಿದ್ದಾಪುರಕ್ಕೆ ಆಗಮಿಸಿದ ಖ್ಯಾತ ನಟ ಹಾಗೂ ಪರಿಸರವಾದಿ ಸುರೇಶ್‌ ಹೆಬ್ಳಿಕರ್.

ಖ್ಯಾತ ನಟ ಹಾಗೂ ಪರಿಸರವಾದಿ ಸುರೇಶ್‌ ಹೆಬ್ಳಿಕರ್‌ ಸಿದ್ದಾಪುರಕ್ಕೆ ಆಗಮಿಸಿದ ಸಂದರ್ಭದಲ್ಲಿ, ಪಟ್ಟಣದ ಹಲವು ಔಷಧೀಯ ಸಸ್ಯವನ ಹಾಗೂ ಪರಿಸರ ತಾಣಗಳಿಗೆ ಭೇಟಿ ನೀಡಿದ್ರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನುಷ್ಯನು ತನ್ನ ಐಷಾರಾಮಿ ಜೀವನವನ್ನು ನಡೆಸಲು ದೊಡ್ಡ ದೊಡ್ಡ ಕಟ್ಟಡಗಳು, ವಾಹನ ಬಳಕೆಯಿಂದ ಪರಿಸರ ನಾಶವಾಗುತ್ತಿದೆ. ಎಲ್ಲಿಯವರೆಗೆ ಪರಿಸರದ ಬಗ್ಗೆ ಕಾಳಜಿ ಬರುವುದಿಲ್ಲವೋ ಅಲ್ಲಿಯವರೆಗೆ ಸರ್ಕಾರ, ಆಡಳಿತ ಸುಧಾರಿಸುವುದಿಲ್ಲ ಎಂದು ಹೇಳಿದ್ರು..

ಅವಶ್ಯಕತೆ ಇಲ್ಲದ ದೇವಾಲಯ, ಕಟ್ಟಡ ನಿರ್ಮಾಣ ಮಾಡುವ ಬದಲು ಹುಲ್ಲಿನ ಗಿಡ ಬೆಳೆಸಿದರೆ, ಮಣ್ಣು ನೀರು ಉಳಿಸಿದರೆ, ಸಸ್ಯ ಪ್ರಾಣಿ ಸಂತತಿ ಉಳಿಯುವುದಲ್ಲದೆ ಬಹಳಷ್ಟು ಮಂದಿಗೆ ಜೀವನ ಸಿಗುತ್ತದೆ ಎಂದು ಹೇಳಿದ್ರು..


ಈ ಸಂದರ್ಭದಲ್ಲಿ ಪರಿಸರ ತಜ್ಞ ಎಂ ಬಿ ನಾಯ್ಕ್ ಕಡಕೇರಿ ಉಪಸ್ಥಿತರಿದ್ದರು.

ದಿವಾಕರ್‌ ನಾಯ್ಕ, ನುಡಿಸಿರಿ ನ್ಯೂಸ್‌, ಸಿದ್ದಾಪುರ.