ಕನ್ನಡದ ಖ್ಯಾತ ಚಿತ್ರ ನಟಿ ಡಾ. ಲೀಲಾವತಿ ನಿಧನಕ್ಕೆ ಕಂಬನಿ ಮಿಡಿದ ಶಾಸಕರಾದ ಆರ್.ವಿ.ದೇಶಪಾಂಡೆ

ಜೋಯಿಡಾ : ಕನ್ನಡದ ಖ್ಯಾತ ಚಿತ್ರ ನಟಿ ಡಾ.ಲೀಲಾವತಿಯವರ ನಿಧನಕ್ಕೆ ಹಳಿಯಾಳ ಜೋಡ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್ ವಿ ದೇಶಪಾಂಡೆ ಅವರು ಕಂಬನಿಯನ್ನು ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ.

ಚಿತ್ರನಟಿ ಲೀಲಾವತಿಯವರ ನಿಧನದ ಕುರಿತಂತೆ ಆರ್ ವಿ ದೇಶಪಾಂಡೆಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿಸಿದಾಗ, ಕನ್ನಡದ ಶ್ರೇಷ್ಠ ನಟಿಯಾಗಿ ಗಮನಸೆಳೆದಿರುವ ಲೀಲಾವತಿಯವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ದಯಪಾಲಿಸಲೆಂದು ಆರ್ ವಿ ದೇಶಪಾಂಡೆ ಅವರು ಪ್ರಾರ್ಥಿಸಿದರು.