ಅಕ್ರಮ ಗೋ ಸಾಗಾಟ: ಮೂರು ವಾಹನ ವಶಕ್ಕೆ ಪಡೆದು, 7 ಜನರ ವಿರುದ್ಧ ಪ್ರಕರಣ ದಾಖಲು

ಹಳಿಯಾಳ: ಪರವಾನಿಗೆ ಇಲ್ಲದೇ ಅಕ್ರಮ ಮತ್ತು ಹಿಂಸಾತ್ಮಕವಾಗಿ ಕರುಗಳು ಸೇರಿ 28 ಆಕಳುಗಳನ್ನು ಸಾಗಿಸುತ್ತಿದ್ದ ಮೂರು 407 ವಾಹನಗಳನ್ನು ಗುರುವಾರ ರಾತ್ರಿ ಹಳಿಯಾಳ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಈ ವೇಳೆ 7 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಹಳಿಯಾಳ ಪಿಎಸ್‌ಐ ವಿನೋದ ರೆಡ್ಡಿ ನೇತೃತ್ವದ ಪೊಲೀಸ್ ತಂಡ
ಹಳಿಯಾಳ ವನಶ್ರೀ ವೃತ್ತದ ಸಮೀಪ ಕಾರ್ಯಾಚರಣೆ ನಡೆಸಿ 10 ಕರು, 18 ಆಕಳು ಸೇರಿ ಒಟ್ಟೂ 28 ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ. ಹಿಂಸಾತ್ಮಕವಾಗಿ ಮೂರು 407 ವಾಹನಗಳಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನಾಪುರ ತಾಲೂಕಿನ ಬೈಲೂರಿನ ಪಾಂಡುರಂಗ ದೇಸುರಕರ ಮತ್ತು ರಾಮಲಿಂಗ ರಾಜಗೋಳಕರ ಸೇರಿ ಒಟ್ಟೂ 7 ಜನರ ಮೇಲೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.