ಪತಂಜಲಿ ಯೋಗ ಸಮಿತಿಯಿಂದ ಜಡಿಬೂಟಿ ದಿವಸ್ ಆಚರಣೆ

ಯಲ್ಲಾಪುರ: ಪತಂಜಲಿ ಪೀಠದ ಆಚಾರ್ಯ ಬಾಲಕೃಷ್ಣ ಅವರ ಜನ್ಮದಿನದ ಪ್ರಯುಕ್ತ ಜಡಿಬೂಟಿ ದಿವಸ್ ಕಾರ್ಯಕ್ರಮವನ್ನು ಪಟ್ಟಣದ ಎಪಿಎಂಸಿ ಆವಾರದಲ್ಲಿ ಪತಂಜಲಿ ಯೋಗ ಸಮಿತಿಯಿಂದ ಆಚರಿಸಲಾಯಿತು.
ಎಪಿಎಂಸಿ ಆವಾರದಲ್ಲಿ ವಿವಿಧ ಗಿಡಗಳನ್ನು ನೆಟ್ಟು, ಔಷಧಿ ಸಸ್ಯಗಳನ್ನು ವಿತರಿಸಲಾಯಿತು.

ಪತಂಜಲಿ ಯೋಗ ಸಮಿತಿಯ ಜಿಲ್ಲಾ ಸಮಿತಿ ಸದಸ್ಯ ಜಿ.ಎಸ್. ಭಟ್ಟ್ ಹಳವಳ್ಳಿ ಮಾತನಾಡಿ ಮನುಷ್ಯನ ಆರೋಗ್ಯಕ್ಕೆ ಗಿಡಮೂಲಿಕೆಗಳು ಅಪಾರ ಕೊಡುಗೆ ನೀಡಿವೆ. ಗಿಡಮೂಲಿಕೆಗಳನ್ನು ನೆಟ್ಟು ಸಂರಕ್ಷಣೆ ಮಾಡುವ ಮೂಲಕ ನಾವು ಜಡಿಬೂಟಿ ದಿವಸ್ ಕಾರ್ಯಕ್ರಮವನ್ನು ಸಾರ್ಥಕಗೊಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಸಮಿತಿ ತಾಲೂಕು ಅಧ್ಯಕ್ಷ ವಿ.ಕೆ ಭಟ್ಟ್ ಶೀಗೆಪಾಲ್, ಅಡಕೆ ವರ್ತಕರ ಸಂಘದ ಅಧ್ಯಕ್ಷ ಆರ್. ವಿ. ಹೆಗಡೆ, ಜಿಲ್ಲಾ ಯುವ ಪ್ರಭಾರಿ ದಿವಾಕರ ಮರಾಠಿ, ಗಂಗಾ ಭಟ್ಟ್, ಕಾವೇರಿ ಹೆಗಡೆ, ವೀಣಾ ರಾಯ್ಕರ ಇತರರು ಉಪಸ್ಥಿತರಿದ್ದರು.