ಮಾನವ-ಹಾವಿನ ಸಂಘರ್ಷ ಕಡಿಮೆ ಮಾಡಲು ಪಿಐಟಿ ಟ್ಯಾಗ್‌ ಮೊರೆ ಹೋದ ಕರ್ನಾಟಕ ಅರಣ್ಯ ಇಲಾಖೆ

ಹುಬ್ಬಳ್ಳಿ:-  ಮಾನವ-ಹಾವಿನ ಸಂಘರ್ಷ ಕಡಿಮೆ ಮಾಡಲು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಅರಣ್ಯ ಇಲಾಖೆ ಮಹತ್ವದ ಅಧ್ಯಯನಕ್ಕೆ ಮುಂದಾಗಿದೆ. ಹಾವುಗಳಿಗೆ ನಿಷ್ಕ್ರಿಯ ಇಂಟಿಗ್ರೇಟೆಡ್ ಟ್ರಾನ್ಸ್‌ಪಾಂಡರ್ (ಪಿಐಟಿ) ಟ್ಯಾಗ್‌ಗಳನ್ನು ಅಳವಡಿಸಲು ಕರ್ನಾಟಕ ಅರಣ್ಯ ಇಲಾಖೆಯು ಸಂಶೋಧನಾ ಮೌಲ್ಯಮಾಪನ ಸಮಿತಿಯಿಂದ ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಸಂಸ್ಥೆಗೆ (ಕೆಟಿಆರ್ -) ಅನುಮತಿ ನೀಡಿದೆ. ಇದು ಹಾವುಗಳ ಚಲನವಲನವನ್ನು ಪತ್ತೆಹಚ್ಚಲು ಮತ್ತು ಮಾನವ-ಹಾವುಗಳ ಘರ್ಷಣೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರಸ್ತುತ, ಅದು ನಾಗರಹಾವು, ರಸೆಲ್ಸ್ ವೈಪರ್ ಮತ್ತು ಪಿಟ್ ವೈಪರ್‌ಗಳ ಕುರಿತು ಮೂರು ಖಾಸಗಿ ಕಾರ್ಯಯೋಜನೆಗಳ ಮುಖಾಂತರ ಕರ್ನಾಟಕ ಅರಣ್ಯ ಇಲಾಖೆಯು ಟೆಲಿಮೆಟ್ರಿಕ್ ಅಧ್ಯಯನಗಳನ್ನು ನಡೆಸುತ್ತಿವೆ.

ಅರಣ್ಯ ಇಲಾಖೆಯು ಎಲ್ಲಾ ರೀತಿಯ ಹಾವುಗಳನ್ನು ಗಣನೆಗೆ ತೆಗೆದುಕೊಳ್ಳಲಿದೆ. ಕೆಟಿಆರ್‌ ಸಂಸ್ಥೆಯಲ್ಲಿ ತರಬೇತಿ ಪಡೆದ ಸಿಬ್ಬಂದಿ, ಸರೀಸೃಪವು ಮನುಷ್ಯರ ಜೊತೆ ಎಷ್ಟು ಬಾರಿ ಸಂಘರ್ಷಕ್ಕೆ  ಒಳಗಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲಾಗುವುದು. ಸಂಸ್ಥೆಯ ಸಿಬ್ಬಂದಿ ರಕ್ಷಿಸುವ ಪ್ರತಿಯೊಂದು ಹಾವು ವಿಷಕಾರಿ ಅಥವಾ ವಿಷಕಾರಿಯಲ್ಲದಿದ್ದರೂ ಅದರೊಳಗೆ ಮೈಕ್ರೋಚಿಪ್ ಅನ್ನು ಸೇರಿಸುತ್ತಾರೆ. ದತ್ತಾಂಶದ ಆಧಾರದ ಮೇಲೆ ಸಂಘರ್ಷವನ್ನು ತಗ್ಗಿಸುವ ಕ್ರಮಗಳನ್ನು ಯೋಜಿಸಲಾಗುವುದು ಎಂದು ವರದಿ ಮಾಡಿದೆ.

ಕೆಟಿಆರ್‌ ಸಂಸ್ಥೆಯ ಉಪ ವಲಯ ಅರಣ್ಯಾಧಿಕಾರಿಗಳ ಪ್ರಕಾರ ಬೇಸಿಗೆಯಲ್ಲಿ ದಿನಕ್ಕೆ ಸರಾಸರಿ ಐದರಿಂದ ಎಂಟು ಹಾವುಗಳನ್ನು ರಕ್ಷಿಸಲಾಗುತ್ತದೆ.

ಭಾರತದಲ್ಲಿನ ಮಾನವ-ವನ್ಯಜೀವಿ ಸಂಘರ್ಷಗಳಲ್ಲಿ ಹಾವು ಕಡಿತವು ಅತಿ ಹೆಚ್ಚು ಮಾನವ ಸಾವುನೋವುಗಳಿಗೆ ಕಾರಣವಾಗುತ್ತದೆ ಎಂದು ವರದಿಗಳು ಸೂಚಿಸುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಪ್ರತಿ ವರ್ಷ ಭಾರತವು ಸುಮಾರು 50 ಲಕ್ಷ ಹಾವು ಕಡಿತ ಪ್ರಸಂಗಗಳು ವರದಿಯಾಗುತ್ತವೆ. ಇದರ ಪರಿಣಾಮವಾಗಿ 81,000 ರಿಂದ 1.38 ಲಕ್ಷ ಜನರು ಸಾವನ್ನಪ್ಪುತ್ತಾರೆ ಮತ್ತು ಬಾಧಿತರ ಪೈಕಿ 4 ಲಕ್ಷಕ್ಕೂ ಹೆಚ್ಚು ಜನರಿಗೆ ಅಂಗಚ್ಛೇದನ ಮಾಡಲಾಗುತ್ತದೆ.

ಉತ್ತರ ಕನ್ನಡದ ದಟ್ಟಕಾಡುಗಳೊಳಗೆ, ವಿಶೇಷವಾಗಿ ಕೆಟಿಆರ್ ವ್ಯಾಪ್ತಿಯಲ್ಲಿ ಭಾರೀ ಜನಸಂಖ್ಯೆ ವಾಸಿಸುವುದನ್ನು ಗಮನಿಸಿದರೆ, ಮಾನವ-ಹಾವುಗಳ ಸಂಘರ್ಷದ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಮತ್ತು ಸಹಬಾಳ್ವೆಯ ಕಡೆಗೆ ಪರಿಹಾರವನ್ನು ಕಂಡುಹಿಡಿಯಲು ಹೆಚ್ಚಿನ ಅಧ್ಯಯನವನ್ನು ನಡೆಸುವ ಅಗತ್ಯವಿದೆ.

ಕೆಟಿಆರ್ ಪ್ರದೇಶವು ನಾಗರಹಾವು, ಸ್ಪೆಕ್ಟಕಲ್ಡ್​​​ ನಾಗರಹಾವು, ರಸೆಲ್ಸ್ ವೈಪರ್, ಗರಗಸದ ವೈಪರ್, ಸಾಮಾನ್ಯ ಕ್ರೈಟ್, ವೈನ್ ಹಾವು, ಹಸಿರು ಅಥವಾ ಬಿದಿರು ಪಿಟ್ ವೈಪರ್ (ಎಲ್ಲಾ ವಿಷಕಾರಿ), ಭಾರತೀಯ ರಾಕ್ ಹೆಬ್ಬಾವು ಮತ್ತು ಇಲಿ ಹಾವು ಸೇರಿದಂತೆ 40 ಕ್ಕೂ ಹೆಚ್ಚು ಬಗೆಯ ಹಾವುಗಳಿಗೆ ನೆಲೆಯಾಗಿದೆ.

ಕೆಟಿಆರ್‌ನ ವನ್ಯಜೀವಿ ಸಂಶೋಧನೆ ಮತ್ತು ತರಬೇತಿ ಕೇಂದ್ರವು ಡೇಟಾವನ್ನು ಸಂಗ್ರಹಿಸುತ್ತದೆ, ಅದನ್ನು ವಿಶ್ಲೇಷಿಸುತ್ತದೆ ಮತ್ತು ಸಂಘರ್ಷ ತಗ್ಗಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ರೂಪಿಸುತ್ತದೆ. ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ್ ರೆಡ್ಡಿ ಮಾತನಾಡಿ, ಈ ಯೋಜನೆಯು ಮಾನವ-ಹಾವುಗಳ ಸಂಘರ್ಷದ ಬಗ್ಗೆ ಹೆಚ್ಚು ಅಗತ್ಯವಿರುವ ವೈಜ್ಞಾನಿಕ ಮಾಹಿತಿಯನ್ನು ನೀಡುತ್ತದೆ. ಯೋಜನೆಯು ಮೂರು ಮುಖ್ಯ ಉದ್ದೇಶಗಳನ್ನು ಹೊಂದಿದೆ: ರಕ್ಷಿಸಿದ ಎಲ್ಲಾ ಹಾವುಗಳ ವೈಜ್ಞಾನಿಕ ಡೇಟಾಬೇಸ್ ಅನ್ನು ನಿರ್ವಹಿಸುವುದು, ಟ್ಯಾಗಿಂಗ್ ಮೂಲಕ ಅವುಗಳ ಮೇಲ್ವಿಚಾರಣೆ ಮಾಡಿ ಮತ್ತು ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗಳ ಸಾಮರ್ಥ್ಯ ಮತ್ತು ಇತ್ತೀಚಿನ ಮೇಲ್ವಿಚಾರಣಾ ತಂತ್ರಗಳ ಮೂಲಕ ಹಾವುಗಳ ಸಂರಕ್ಷಣೆಗೆ ಮುಂದಾಗುತ್ತೇವೆ ಎಂದಿದ್ದಾರೆ.

ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ ಇದೇ ರೀತಿಯ ಅಧ್ಯಯನಗಳು ನಾಗರಹಾವಿನ ಬಗ್ಗೆ ಹಲವಾರು ರಹಸ್ಯಗಳನ್ನು ಬಹಿರಂಗಪಡಿಸಿವೆ; ಹುಣಸೂರು ಮೂಲದ ಹರ್ಪಿಟಾಲಜಿಸ್ಟ್ ಗೆರ್ರಿ ಮಾರ್ಟಿನ್ ಅವರು ಹಾವು ಕಡಿತದಿಂದ ರೈತರ ಸಾವು ಸಮಭವಿಸುವುದರ ಹಿಂದೆ ನಾಲ್ಕು ವಿಷಕಾರಿ ಹಾವುಗಳಲ್ಲಿ ಒಂದಾದ ರಸೆಲ್ಸ್ ವೈಪರ್ ಅನ್ನು ಅಧ್ಯಯನ ಮಾಡುತ್ತಿದ್ದಾರೆ; ಆಗುಂಬೆಯ ಮಳೆಕಾಡು ಪರಿಸರ ವಿಜ್ಞಾನದ ಕಳಿಂಗ ಕೇಂದ್ರದ ಸಂಶೋಧಕಿ ಪ್ರಿಯಾಂಕಾ ಸ್ವಾಮಿ ಪಿಟ್ ವೈಪರ್‌ಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.