ಜೋಯಿಡಾದ ನಂದಿಗದ್ದಾದಲ್ಲಿ ಸೇವಾ ಸಹಕಾರಿ ಸಂಘದಲ್ಲಿ ಸಹಕಾರಿ ಸಪ್ತಾಹ ಕಾರ್ಯಕ್ರಮ


ಜೋಯಿಡಾ ತಾಲೂಕಿನ ಯರಮುಖದ ನಂದಿಗದ್ದಾದಲ್ಲಿರುವ ವಿವಿದ್ದೋದ್ದೇಶಗಳ ಗ್ರಾಮೀಣ ಸೇವಾ ಸಹಕಾರಿ ಸಂಘದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಹಕಾರಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು..

ಈ ವೇಳೆ ಸಂಘದ ಸಲಹೆಗಾರರಾದ ಎಸ್‌.ಡಿ ದಾನಗೇರಿ ಮಾತನಾಡಿ, ರಾಜ್ಯದಲಿರುವ ಎಲ್ಲ ಸಹಕಾರಿ ಸಂಘದ ಕಛೇರಿಗಳಲ್ಲಿ ಇಂದು ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏಳು ಬಣ್ಣಗಳನ್ನು ಹೊಂದಿರುವ ಸಂಘದ ಶಾಲ್‌ ಪ್ರತಿ ಬಣ್ಣವೂ ಕೂಡ ಒಂದೊಂದು ಸಹಕಾರದ ತತ್ವ ಸಾರುತ್ತದೆ. ಸಹಕಾರಿ ಬೇಸಾಯ, ಉದ್ದಿಮೆ, ಪತ್ತು ಮತ್ತು ಹಣಕಾಸು, ಶಿಕ್ಷಣ, ಸಹಕಾರ, ಮಾನವನ ಚಟುವಟಿಕೆ ಹಾಗೂ ಇನ್ನಿತರ ವಿಷಯಗಳ ಕುರಿತಾದ ತತ್ವಗಳನ್ನು ತಿಳಿಸುತ್ತದೆ ಎಂದು ಹೇಳಿದ್ರು..

ಈ ವೇಳೆ ಸಂಘದ ಉಪಾಧ್ಯಕ್ಷರಾದ ಸುದರ್ಶನ ಭಾಗವತ್‌, ಸದಸ್ಯರಾದ ಶಶಿಕಾಂತ ಹೆಗಡೆ, ಸುಬ್ರಯ್ಯ ದಾನಗೇರಿ, ಸುಭ್ರಮಣ್ಯ ಭಾಗವತ್‌, ಸಂದೇಶ ದೇಸಾಯಿ ಹಾಗೂ ಸಹಕಾರಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ರು…

ನುಡಿಸಿರಿ ನ್ಯೂಸ್‌, ಹೊನ್ನಾವರ