ಹೊನ್ನಾವರದ ಮಾವಿನಕುರ್ವಾ ಬೆಲೆಕೇರಿಯಲ್ಲಿ ಯುವಕನೊರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ

ಹೊನ್ನಾವರ:ತಾಲೂಕಿನ ಮಾವಿನಕುರ್ವಾ ಬೆಲೆಕೇರಿಯಲ್ಲಿ ಯುವಕನೊರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ಯುವಕ ಮಾವಿನಕುರ್ವಾ ಬೆಲೆಕೇರಿ ನಿವಾಸಿ ವೃತ್ತಿಯಲ್ಲಿ ಕೂಲಿಕಾರನಾಗಿದ್ದ ಕೃಷ್ಣ ಹನುಮಂತ ಅಂಬಿಗ(23) ಎಂದು ಗುರುತಿಸಲಾಗಿದೆ.ಈತ ಕೆಲದಿನಗಳಿಂದ ಕುಡಿತದ ಚಟಕ್ಕೆ ದಾಸನಾಗಿದ್ದ ಎನ್ನಲಾಗಿದೆ. ಬುಧವಾರ ರಾತ್ರಿ ಅವಧಿಯಲ್ಲಿ ಮನೆಯ ಕೋಣೆಯಲ್ಲಿನ ಜಂತಿಗೆ ಕೇಸರಿಶಾಲನ್ನು ನೇಣಿನ ರೀತಿಯಲ್ಲಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮೃತನ ಸಹೋದರಿ ಕುಸುಮಾ ರಾಜು ಅಂಬಿಗ ಹೊನ್ನಾವರ ಪೊಲೀಸ್ ಠಾಣೆಗೆ ದೂರು ನೀಡದ್ದಾರೆ.ಪ್ರಕರಣ ದಾಖಲಿಸಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.