ಭೌತಶಾಸ್ತ್ರ ವಿಭಾಗ( M.Sc Physics) ನಲ್ಲಿ 4 ಚಿನ್ನದ ಪದಕಗಳನ್ನು ಪಡೆದ ರಾಜೇಶ್ವರಿ ಮಂಜುನಾಥ ನಾಯ್ಕ

30 ಅಕ್ಟೋಬರ್ 2023 ರಂದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ನಡೆದ 73ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜೇಶ್ವರಿ ಮಂಜುನಾಥ ನಾಯ್ಕ
ಸ್ನಾತಕೋತ್ತರ ಪದವಿ – ಭೌತಶಾಸ್ತ್ರ ವಿಭಾಗ( M.Sc Physics)
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇವರು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು,ಸನ್ಮಾನ್ಯ ರಾಜ್ಯಪಾಲರಿಂದ 4 ಚಿನ್ನದ ಪದಕಗಳನ್ನು ಪಡೆದಿರುತ್ತಾರೆ. ಈಕೆ ಜಲವಳ್ಳಿ ಗ್ರಾಮದ ಬಡ ಕುಟುಂಬದಲ್ಲಿ ಹುಟ್ಟಿ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಓದಿ .ಈ ಸಾಧನೆ ಮಾಡಿರುವುದು ಅಭಿನಂದನಾರ್ಹ.

ನಾಲ್ಕು ಚಿನ್ನದ ಪದಕಗಳು:-
೧.ಡಾ. ಬಸವರಾಜ ಜ್ಯೋತಿ ಚಿನ್ನದ ಪದಕ
೨.ಪ್ರೊ.ಎನ್ ಆರ್ ತಾವಡೆ ಚಿನ್ನದ ಪದಕ
೩.ಪ್ರೊ.ಎಸ್ ಎಸ್ ಸುಲಿಗಾವಿ ಮೆಮೋರಿಯಲ್ ಚಿನ್ನದ ಪದಕ
೪.ಪ್ರೊ.ಎಸ್ ಎಸ್ ಕುಬಕಡ್ಡಿ  ಚಿನ್ನದ  ಪದಕ